ಚಾಮರಾಜನಗರ: ಲಾಕ್ಡೌನ್ನಿಂದಾಗಿ, ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಹದೇಶ್ವರಸ್ವಾಮಿ ದೇವಾಲಯದ ಆದಾಯ ₹15 ಕೋಟಿಗಳಷ್ಟು ಖೋತಾ ಆಗಿದೆ.
ಮಾರ್ಚ್ 20ರಿಂದ ದೇವಾಲಯ ಸಾರ್ವಜನಿಕರಿಗೆ ಬಂದ್ ಆಗಿದೆ. ರಾಜ್ಯದ ವಿವಿಧೆಡೆಯಿಂದ ಹಾಗೂ ನೆರೆಯ ರಾಜ್ಯಗಳಿಂದ ಪ್ರತಿದಿನ ಸಾವಿರಾರು ಭಕ್ತರು ಬೆಟ್ಟಕ್ಕೆ ನೀಡುತ್ತಾರೆ. ಬೇಸಿಗೆ ರಜೆಯಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚು. ಆದರೆ, ಎರಡು ತಿಂಗಳ ಅವಧಿಯಲ್ಲಿ ಭಕ್ತರಿಂದ ಬರುತ್ತಿದ್ದ ಆದಾಯ ನಿಂತುಹೋಗಿದೆ.
ಪ್ರತಿ ತಿಂಗಳು ದೇವಸ್ಥಾನದ ಹುಂಡಿಗಳಲ್ಲಿ ಸರಾಸರಿ ₹1.4 ಕೋಟಿಯಷ್ಟು ಸಂಗ್ರಹವಾಗುತ್ತಿತ್ತು. ಜೊತೆಗೆ ಚಿನ್ನದ ತೇರು ಸೇರಿದಂತೆ ವಿವಿಧ ಸೇವೆಗಳು, ಲಾಡು ಮಾರಾಟ, ಮುಡಿಸೇವೆ, ವಸತಿ ಗೃಹ ಸೇರಿದಂತೆ ವಿವಿಧ ಮೂಲಗಳಿಂದ ತಿಂಗಳಿಗೆ ₹6 ಕೋಟಿವರೆಗೂ ಆದಾಯ ಬರುತ್ತಿತ್ತು. ಈ ವರ್ಷ ಲಾಕ್ಡೌನ್ ಕಾರಣದಿಂದ ಯುಗಾದಿ ಜಾತ್ರೆಯೂ ನಡೆದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.