ADVERTISEMENT

ಕಾಡು ಪ್ರಾಣಿಗಳ ಕಳ್ಳಬೇಟೆ: ಮತ್ತೊಬ್ಬ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 3:22 IST
Last Updated 27 ಆಗಸ್ಟ್ 2020, 3:22 IST
ಇತ್ತೀಚೆಗೆ ಬಂಧಿತರಿಂದ ವಶಪಡಿಸಿಕೊಂಡಿದ್ದ ಪ್ರಾಣಿಗಳ ಅಂಗಾಂಗಗಳು
ಇತ್ತೀಚೆಗೆ ಬಂಧಿತರಿಂದ ವಶಪಡಿಸಿಕೊಂಡಿದ್ದ ಪ್ರಾಣಿಗಳ ಅಂಗಾಂಗಗಳು   

ಹನೂರು (ಚಾಮರಾಜನಗರ): ವಿವಿಧ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ಮೂಳೆ ಹಾಗೂ ಉಗುರುಗಳನ್ನು ಸಾಗಣೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಅರಣ್ಯಾಧಿಕಾರಿಗಳು ಗುರುವಾರ ಮುಂಜಾವು ಬಂಧಿಸಿದ್ದಾರೆ.

ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಪೋಡಿನಲ್ಲಿ ಮಹದೇವ ಎಂಬುವವರನ್ನು ಗುರುವಾರ‌ ಮುಂಜಾವು‌ 3 ಗಂಟೆ‌ ಸುಮಾರಿಗೆ‌ ಬಂಧಿಸಲಾಗಿದೆ. ಅವರನ್ನು ಐದನೇ ಆರೋಪಿ ಎಂದು ಹೆಸರಿಸಲಾಗಿದೆ.

ಇತ್ತೀಚೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದಮಲೆ‌ಮಹದೇಶ್ವರ ವನ್ಯಧಾಮ, ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಧಾಮದ ಅಧಿಕಾರಿಗಳು‌ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ADVERTISEMENT

ಅವರ‌ ಬಳಿಯಿಂದ ಹುಲಿಯ ಎರಡು ಉಗುರು, ಮೂಳೆಗಳು, ಚಿರತೆ ಉಗುರು, ಎರಡು‌ ಜಿಂಕೆ, ಎರಡು ಕಾಡು ಕುರಿ, ಎರಡು ಹಾರುವ ಅಳಿಲು, ಸೀಳು ನಾಯಿಯ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತಲೆಮರೆಸಿಕೊಂಡಿದ್ದ ಇನ್ನೂ ಮೂವರು ಆರೋಪಿಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು.

ಬಂಧಿತ ಆರೋಪಿಗಳು ವಿಚಾರಣೆ ವೇಳೆ ನೀಡಿದ‌ ವಿವರಗಳನ್ನು ಆಧರಿಸಿ, ಕಾರ್ಯಾಚರಣೆ ಆರಂಭಿಸಿದ ಅರಣ್ಯಾಧಿಕಾರಿಗಳು, ಮಹದೇವ ಎಂಬುವವರನ್ನು ಬಂಧಿಸಿದ್ದಾರೆ.

ತನಿಖಾಧಿಕಾರಿಗಳು‌ ಹೆಚ್ಚಿನ ವಿವರಗಳನ್ನು ‌ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.