ADVERTISEMENT

ಕೊಳಕು ಮಂಡಲ ಹಾವು ಕಚ್ಚಿ ಮೈಸೂರಿನ‌ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 6:21 IST
Last Updated 13 ಏಪ್ರಿಲ್ 2021, 6:21 IST

ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಎಲೆಕ್ಟ್ರಿಕಲ್ ಕೆಲಸಕ್ಕೆಂದು ಬಂದಿದ್ದ ಮೈಸೂರಿನ ಯುವಕ ಹಾವು ಕಚ್ಚಿ ಮೃತಪಟ್ಟಿದ್ದಾರೆ.

ಸ್ನೇಹಿತರ ಜೊತೆ ಬೆಟ್ಟಕ್ಕೆ ಬಂದಿದ್ದ‌ ಮಧು ಸೋಮವಾರ ಕೆಲಸ‌ ಮಾಡುತ್ತಿದ್ದ ವೇಳೆ ಮೆಟ್ಟಿಲಿನ‌ ಮೇಲೆ ಹರಿದು ಹೋಗುತ್ತಿದ್ದ ಹಾವನ್ನು ಹೆಬ್ಬಾವಿನ ಮರಿ ಎಂದು ತಿಳಿದು ಕೊಳಕು‌ಮಂಡಲ ಹಾವನ್ನು ಹಿಡಿದಿದ್ದಾನೆ.

ಎಡಗೈಯಲ್ಲಿ ಹಿಡಿದು ಅದನ್ನು ಬಲಗೈಗೆ ವರ್ಗಾಯಿಸುವಾಗ ಬಲಗೈನ ಹೆಬ್ಬರಳಿಗೆ ಹಾವು ಕಚ್ಚಿದೆ. ಬಳಿಕ ಆತನನ್ನು ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.