ಗುಂಡ್ಲುಪೇಟೆ: ಪರವಾನಗಿ ಇಲ್ಲದೆ ಕೇರಳಕ್ಕೆ ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ ಎರಡು ಟಿಪ್ಪರ್ಗಳನ್ನು ಗಣಿ ಇಲಾಖೆ ಅಧಿಕಾರಿಗಳು ಹಿಡಿದು ದಂಡ ವಿಧಿಸಿರುವ ಘಟನೆ ತಾಲ್ಲೂಕಿನ ಮದ್ದೂರು ಗೇಟ್ ಬಳಿಯಲ್ಲಿ ನಡೆದಿದೆ.
ತಾಲ್ಲೂಕಿನಿಂದ ಕೇರಳಕ್ಕೆ ಪರವಾನಗಿ ತೆಗೆದುಕೊಳ್ಳದೆ ಬಿಳಿ ಕಲ್ಲು ತುಂಬಿಕೊಂಡು ಸಂಚರಿಸುತ್ತಿದ್ದ ಕೆ.ಎಲ್-08 ಸಿಎ-0331 ಹಾಗೂ ಕೆ.ಎಲ್-42 ಟಿ-8343 ನೋಂದಣಿಯ ಎರಡು ಟಿಪ್ಪರ್ ಲಾರಿಗಳನ್ನು ಗಣಿ ಇಲಾಖೆ ಅಧಿಕಾರಿಗಳು ಮದ್ದೂರು ಗೇಟ್ ತಡೆದು ಪರಿಶೀಲನೆ ನಡೆಸಿದಾಗ ಪರವಾನಗಿ ಇಲ್ಲದಿರುವುದು ಕಂಡು ಬಂದಿದೆ. ಇದರಲ್ಲಿ ಒಂದು ಟಿಪ್ಪರ್ಗೆ ಸ್ಥಳದಲ್ಲೆ ₹91,620 ದಂಡ ವಿಧಿಸಿ, ಮತ್ತೊಂದು ಟಿಪ್ಪರ್ ಲಾರಿಯನ್ನು ಜಪ್ತಿ ಮಾಡಿ ಗುಂಡ್ಲುಪೇಟೆ ಪೊಲೀಸರ ಸುಪರ್ದಿಗೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.