ADVERTISEMENT

ಕಾಗಿನೆಲೆ ಕಲಬುರ್ಗಿ ಶಾಖಾ ಮಠದ ಸಿದ್ದರಾಮಾನಂದ ಶ್ರೀಗಳಿಗೆ ಕಿಡ್ನಿ ಕಸಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 18:52 IST
Last Updated 28 ಜೂನ್ 2018, 18:52 IST

ಬೆಂಗಳೂರು: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಕಲಬುರ್ಗಿ ಶಾಖಾ ಮಠದ ಪೀಠಾಧ್ಯಕ್ಷ ಸಿದ್ದರಾಮಾನಂದ ಶ್ರೀಗಳು ಕಿಡ್ನಿ ಶಸ್ತ್ರಚಿಕಿತ್ಸೆಗಾಗಿ ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಕಿಡ್ನಿ ವೈಫಲ್ಯಕ್ಕೆ ಒಳಗಾಗಿರುವ ಅವರು ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. 60 ವರ್ಷದ ಅವರ ತಾಯಿ ಜಯಮ್ಮ ಕಿಡ್ನಿ ದಾನ ಮಾಡಲಿದ್ದಾರೆ. ಆರಂಭದಲ್ಲಿ ಬೆಂಗಳೂರು ಡಯಾಬಿಟಿಕ್‌ ಕೇಂದ್ರದಲ್ಲಿ ಚಿಕಿತ್ಸೆ
ಪಡೆದಿದ್ದರು. 41 ವರ್ಷದ ಶ್ರೀಗಳಿಗೆ ಡಾ.ಸುರೇಶ್‌ ಬಾಬು ನೇತೃತ್ವದ ತಂಡ ಕಸಿ ಮಾಡಲಿದೆ’ ಎಂದು ಮಠದ ವಕ್ತಾರರುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT