ADVERTISEMENT

ಮಾದಾರ ಚನ್ನಯ್ಯ ನಾಮಫಲಕ ಅನಾವರಣ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:18 IST
Last Updated 8 ಡಿಸೆಂಬರ್ 2023, 16:18 IST
ಸಂತೇಮರಹಳ್ಳಿಯ ಆದಿಜಾಂಬವರ ಬಡಾವಣೆ ವತಿಯಿಂದ ಮಾದಾರ ಚನ್ನಯ್ಯ ವಿಚಾರ ವೇದಿಕೆ ನಾಮಫಲಕವನ್ನು ಅನಾವರಣಗೊಳಿಸಲಾಯಿತು
ಸಂತೇಮರಹಳ್ಳಿಯ ಆದಿಜಾಂಬವರ ಬಡಾವಣೆ ವತಿಯಿಂದ ಮಾದಾರ ಚನ್ನಯ್ಯ ವಿಚಾರ ವೇದಿಕೆ ನಾಮಫಲಕವನ್ನು ಅನಾವರಣಗೊಳಿಸಲಾಯಿತು   

ಸಂತೇಮರಹಳ್ಳಿ: ಇಲ್ಲಿನ ಯಳಂದೂರು ರಸ್ತೆಯಲ್ಲಿ ಮಾದಾರ ಚನ್ನಯ್ಯ ವಿಚಾರ ವೇದಿಕೆಯ ನೂತನ ನಾಮಫಲಕವನ್ನು ಗುರುವಾರ ಅನಾವರಣಗೊಳಿಸಲಾಯಿತು.

ಗ್ರಾಮಪಂಚಾಯಿತಿ ಸದಸ್ಯ ಶಿವಯ್ಯ ಮಾತನಾಡಿ, ‘ಬಡಾವಣೆಯಲ್ಲಿ ನೂತನವಾಗಿ ಮಾದಾರ ಚನ್ನಯ್ಯ ವೇದಿಕೆ ಉದ್ಘಾಟಿಸಲಾಗಿದೆ. ಈ ವೇದಿಕೆಗೆ ಬಡಾವಣೆಯ ಮುಖಂಡರು, ಯುವಕರು ಹಾಗೂ ಯಜಮಾನರುಗಳು ಉತ್ತಮ ಸಹಕಾರ ನೀಡಬೇಕು. ಈ ವಿಚಾರ ವೇದಿಕೆಯಿಂದ ಶಿಕ್ಷಣ ಹಾಗೂ ಬಡಾವಣೆಯ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸಬೇಕು. ಜತೆಗೆ ಸಂಘಟನೆ ಮೂಲಕ ಹೋರಾಟ ಮಾಡಬೇಕು’ ಎಂದರು.

ಮುಖಂಡರಾದ ಕಿಟ್ಟಪ್ಪ, ಶಿವರಾಜು, ಎಸ್.ರಾಜೇಶ್, ಪಿ.ಚೇತನ್, ಲೋಕೇಶ್, ರಾಚಪ್ಪ, ಮಹಾದೇವಯ್ಯ, ಗಾರೆ ಮಹದೇವ, ಲಿಂಗರಾಜು, ನೀಲಕಂಠಯ್ಯ, ಸುಂದರ, ಶ್ರೀನಿವಾಸ ಇತರರು ಇದ್ದರು.  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.