ADVERTISEMENT

ಅಕ್ರಮ ಸಿಲಿಂಡರ್ ವಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 7:30 IST
Last Updated 20 ಸೆಪ್ಟೆಂಬರ್ 2011, 7:30 IST

ಚಿಕ್ಕಬಳ್ಳಾಪುರ: ನಗರದ ನಕ್ಕಲಕುಂಟೆ ಮತ್ತು ರಾಘವೇಂದ್ರ ಮಠದ ಬಳಿಯಿರುವ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ.

 ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯತೀಶ್ (48) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಮನ್ಸೂರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

`ಖಚಿತ ಸುಳಿವಿನ ಮೇರೆಗೆ ಮನೆಗಳ ಮೇಲೆ ದಾಳಿ ನಡೆಸಿ, 17 ದೊಡ್ಡ ಸಿಲಿಂಡರ್ ಮತ್ತು 10 ಚಿಕ್ಕ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಆರೋಪಿಗಳು ಸಿಲಿಂಡರ್‌ಗಳನ್ನು ಬೇರೆ ಕಾರಣಗಳಿಗೆ ದುರ್ಬಳಕೆ ಮಾಡುತ್ತಿದ್ದರು.

ಆಟೋರಿಕ್ಷಾಗಳಿಗೆ ಗ್ಯಾಸ್‌ರೀಫಿಲಿಂಗ್ ಮಾಡುವುದು. ಬೇರೆಯವರಿಗೆ ಸಿಲಿಂಡರ್ ಅಕ್ರಮವಾಗಿ ನೀಡುವುದು ಮುಂತಾದವುಗಳನ್ನು ಮಾಡುತ್ತಿದ್ದರು. ಅಕ್ರಮ ಸಿಲಿಂಡರ್‌ಗಳ ಸಂಗ್ರಹಣೆಗೆ ಸಂಬಂಧಿಸಿದಂತೆ ಆರೋಪಿಗಳ ಜಾಲವಿದೆ. ಪ್ರಕರಣದ ಪ್ರಮುಖ ಆರೋಪಿಗಳನ್ನು ಶೀಘ್ರವೇ ಸೆರೆ ಹಿಡಿಯಲಾಗುವುದು~ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.