ADVERTISEMENT

ಯುವಜನರತ್ತ ನಿರ್ಲಕ್ಷ್ಯ: ಡಿವೈಎಫ್ಐ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 6:17 IST
Last Updated 20 ಮಾರ್ಚ್ 2014, 6:17 IST

ಶಿಡ್ಲಘಟ್ಟ: ಸರ್ಕಾರಗಳು ಯುವ ಜನತೆ­ಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಕೃಷ್ಣಾರೆಡ್ಡಿ ಆರೋಪಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ‘ನಾವೆಲ್ಲಾ ಚೆನ್ನಾಗಿರಲು ಮೂವತ್ತು ನಿಮಿಷ ಮೀಸಲಿಡಿ ಪ್ಲೀಸ್’ ಪುಸ್ತಕವನ್ನು ಬಿಡು­ಗಡೆ ಮಾಡಿ ಮಾತನಾಡಿ, ದೇಶದಲ್ಲಿ ಅರಾಜಕತೆ ಹೆಚ್ಚಾಗಿದೆ. ಯುವಜನತೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ­ಗಳೂ ವಿಫಲವಾಗಿವೆ. ಚುನಾವಣೆಗಳು ಬರುತ್ತಿದ್ದಂತೆ ದೇಶದ ಯುವಜನತೆ­ಯನ್ನು ಆಕರ್ಷಿಸಲು ವಿವಿಧ ರೂಪ­ಗಳಲ್ಲಿ ಕಾರ್ಯತಂತ್ರವನ್ನು ರೂಪಿ­ಸುತ್ತಿವೆ ಎಂದರು.

ಲೋಕಸಭಾ ಚುನಾವಣೆ ಘೋಷಣೆ­-ಯಾವುದಕ್ಕೆ ಮೊದಲೇ ಗುಜರಾತ್ ನರ­ಮೇಧದ ಕುಖ್ಯಾತಿ ಪಡೆದ ನರೇಂದ್ರ­ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯ­ರ್ಥಿ­ಯನ್ನಾಗಿ ಘೋಷಣೆ ಮಾಡಿದೆ. ಅಲ್ಲಿನ ವಸ್ತುಸ್ಥಿತಿಯನ್ನು ಜನತೆಗೆ ತೋರಿ­ಸುವಲ್ಲಿ ಮಾಧ್ಯಮಗಳು ವಿಫಲ­ವಾಗುತ್ತಿವೆ. ಸಾವಿರಾರು ಮಂದಿ ಅಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಹೆಣ್ಣುಮಕ್ಕಳು ಬೀದಿಗಳಲ್ಲಿ ಸ್ನಾನ ಮಾಡುವಂತಹ ಹೀನಾಯ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.

ಗುಜರಾತ್ ರಾಜ್ಯದಲ್ಲಿ ಕಾರ್ಪೋ­ರೇಟ್ ಕಂಪೆನಿಗಳು ಹೂಡುತ್ತಿರುವ ಬಂಡ­ವಾಳಕ್ಕಿಂತ ದುಪ್ಪಟ್ಟು ಸವಲತ್ತನ್ನು ಸರ್ಕಾರ ಕಂಪೆನಿಗಳಿಗೆ ನೀಡುತ್ತಿದ್ದು, ಜನ­ಸಾಮಾನ್ಯರನ್ನು ಕಡೆಗಣಿಸಲಾಗಿದೆ. ಇನ್ನು ಕಾಂಗ್ರೆಸ್ ನೀತಿಯಿಂದಾಗಿ ದೇಶ­ದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ ಎಂದು ಆರೋಪಿ­ಸಿದರು.

ಡಿವೈಎಫ್ಐ ರಾಜ್ಯ ಮುಖಂಡ ಮುನೀಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ವಾಸು, ಬಾಬು, ನಾಗೇಶ್, ಪ್ರದೀಪ್, ಮುಜಾಹಿದ್, ಅಂಬರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.