ADVERTISEMENT

ಚಿಂತಾಮಣಿ: ಕುರಿ ತೊಳೆಯುವಾಗ ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 12:11 IST
Last Updated 19 ಅಕ್ಟೋಬರ್ 2021, 12:11 IST
ಚಿಂತಾಮಣಿ ತಾಲ್ಲೂಕಿನ ಕೊಡದವಾಡಿ ಕೆರೆಯಲ್ಲಿ ಬಾಲಕರ ಶವಗಳಿಗಾಗಿ ಹುಡುಕಾಟ ನಡೆಸಿರುವುದು
ಚಿಂತಾಮಣಿ ತಾಲ್ಲೂಕಿನ ಕೊಡದವಾಡಿ ಕೆರೆಯಲ್ಲಿ ಬಾಲಕರ ಶವಗಳಿಗಾಗಿ ಹುಡುಕಾಟ ನಡೆಸಿರುವುದು   

ಚಿಂತಾಮಣಿ: ತಾಲ್ಲೂಕಿನ ಕೊಡದವಾಡಿ ಕೆರೆಯಲ್ಲಿ ಮುಳುಗಿ ಮಂಗಳವಾರ ಮೂವರು ಬಾಲಕರು ಮೃತಪಟ್ಟಿದ್ದಾರೆ.

ಕೊಡದವಾಡಿ ಗ್ರಾಮದ ಸೋದನ್ (15), ಸುದರ್ಶನ್(17) ಬಚ್ಚವಾರಹಳ್ಳಿಯ ಸತೀಶ್ (17) ಮೃತರು.

ಗ್ರಾಮದ ವಾಟರ್ ಮೆನ್ ಚೌಡಪ್ಪ ಅವರ ಮಕ್ಕಳಾದ ಸುದರ್ಶನ್, ಅರ್ಜುನ್ ಮತ್ತು ಅವರ ತಂಗಿಯ ಮಗ ಬಚ್ಚವಾರಹಳ್ಳಿ ಸತೀಶ್ ಹಾಗೂ ಗ್ರಾಮದ ಸುರೇಶ್ ಎಂಬುವವರ ಪುತ್ರ ಸೋದನ್ ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಹೋಗಿದ್ದರು. ಅರ್ಜುನ್ ಕೆರೆಯ ದಡದಲ್ಲಿ ಕುಳಿತ್ತಿದ್ದ. ಉಳಿದವರು ಕೆರೆಗೆ ಇಳಿದಿದ್ದರು.

ADVERTISEMENT

ಸೋದನ್ ಮತ್ತು ಸುದರ್ಶನ್ ನೀರಿನಲ್ಲಿ ಮುಳುಗುತ್ತಿದ್ದಾಗ ಸತೀಶ್ ಇವರ ರಕ್ಷಣೆಗೆ ಮುಂದಾಗಿದ್ದು ಮೂವರು ನೀರು ಪಾಲಾಗಿದ್ದಾರೆ.

ಬಾಲಕರ ಕುಟುಂಬದವರ ಆಕ್ರಂದನ ಮನಕಲಕುವಂತಿತ್ತು. ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಕೆರೆಯ ಬಳಿ ಜಮಾಯಿಸಿದ್ದರು. ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದರು. ಬಾಲಕರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.