ಶಿಡ್ಲಘಟ್ಟ: ‘ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಅದೆಷ್ಟೋ ಮಂದಿ ಸಾರ್ಥಕ ಜೀವನವನ್ನು ನಡೆಸುತ್ತಿದ್ದು, ಅವರಿಂದ ನಾವೆಲ್ಲರೂ ಪ್ರೇರಿತರಾಗಬೇಕು’ ಎಂದು ಶ್ರೀಸಾಯಿನಾಥ ಜ್ಞಾನ ಮಂದಿರದ ಮುಖ್ಯಸ್ಥ ಎಂ. ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀಸಾಯಿನಾಥ ಜ್ಞಾನ ಮಂದಿರದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ತಾಲ್ಲೂಕು ಘಟಕ ಹಾಗೂ ಸಾಯಿನಾಥ ಜ್ಞಾನ ಮಂದಿರದ ಸಹಯೋಗದಡಿ ನಡೆದ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ ಎಂ.ಎಸ್. ಮಹಿಮಾ, ಆರ್. ಅನುಷ, ಜನನಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಎಸ್.ವಿ. ಮಾಲತಿ, ಎಸ್. ದಾವೂದ್ ಪಾಷಾ, ಮನೋರ್ ಮಣಿ, ನಾರಾಯಣ ಸ್ವಾಮಿ, ನಂಜಪ್ಪ ರೆಡ್ಡಿ, ಸುರೇಶ್, ಮುನಿನಂಜಪ್ಪ, ಮಂಜುನಾಥ, ಮುನಿರಾಜು ಅವರನ್ನು ಸನ್ಮಾನಿಸಲಾಯಿತು. ವಸಾಪ ಗೌರವಾಧ್ಯಕ್ಷ ಕೆ. ಯೋಗಾನಂದ, ಮುಖಂಡ ಭಕ್ತರಹಳ್ಳಿ ಬೈರೇಗೌಡ, ದೇವರಾಜ್, ಗಜೇಂದ್ರ, ವೆಂಕಟೇಶಪ್ಪ, ನರಸಿಂಹರಾಜು, ಮಂಜುನಾಥ, ನಾರಾಯಣ ಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.