ಗುಡಿಬಂಡೆ: ಹೊಸ ಮೊಬೈಲ್ ಕೊಡಿಸಲಿಲ್ಲಎಂದು ಮನೆಬಿಟ್ಟು ಹೋಗಿದ್ದ ಇಲ್ಲಿನ ನಿವಾಸಿ ಗೋಪಿಕೃಷ್ಣ (17) 22 ದಿನಗಳ ನಂತರ ಶವವಾಗಿ ಪತ್ತೆ ಆಗಿದ್ದಾರೆ.
ಗುಡಿಬಂಡೆ ಪ್ರವಾಸಿ ಮಂದಿರದ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಗೋಪಿಕೃಷ್ಣ ರೂಲರ್ ಗುಡಿಬಂಡೆ ನಿವಾಸಿ ಶ್ಯಾಮಲಾ ಎಂಬುವವರ ಮಗನಾಗಿದ್ದು ಜು.17ರಂದು ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.