ಚೇಳೂರು: ಚೇಳೂರಿನಲ್ಲಿದ್ದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ನ ಎಟಿಎಂ ಮುಚ್ಚಲಾಗಿದೆ. ಇದರಿಂದಾಗಿ ಸ್ಥಳೀಯ ಗ್ರಾಹಕರು ನಗದಿಗಾಗಿ ಬೇರೆಡೆ ಹೋಗುವ ಪ್ರಮೇಯ ಬಂದಿದೆ.
ಕುರಿ, ಮೇಕೆ ಸಂತೆ, ತರಕಾರಿ ಮಾರುಕಟ್ಟೆಗೆ ಬರುವವರಿಗೆ ಈ ಎಟಿಎಂ ಸಹಕಾರಿ ಆಗಿತ್ತು. ಈಗ ಮುಚ್ಚಿದ್ದರಿಂದ ಅನಾನುಕೂಲ ಆಗಿದೆ.
ಎಟಿಎಂ ಸೌಲಭ್ಯವನ್ನು ಬ್ಯಾಂಕಿನವರು ಉಚಿತವಾಗೇನೂ ನೀಡಲ್ಲ. ಅದಕ್ಕೆ ವರ್ಷಕ್ಕೆ ಇಂತಿಷ್ಟು ಎಂದು ಗ್ರಾಹಕರಿಂದ ಶುಲ್ಕ ಪಡೆಯುತ್ತಾರೆ. ಬ್ಯಾಂಕಿನ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಹಕ ಜೆ.ಕೆ.ರಾಮಚಂದ್ರ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.