ADVERTISEMENT

ಚಿಕ್ಕಬಳ್ಳಾಪುರ: ವಿಷ ಸೇವಿಸಿ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 8:44 IST
Last Updated 2 ಅಕ್ಟೋಬರ್ 2018, 8:44 IST
ಗುಡಿಬಂಡೆ ತಾಲ್ಲೂಕು ಆಸ್ಪತ್ರೆಯಲ್ಲಿರುವ ಮೃತ ಲಕ್ಷ್ಮಯ್ಯ ಅವರ ಮೃತದೇಹವನ್ನು ತಹಶೀಲ್ದಾರ್ ಮುನಿರಾಜು ವೀಕ್ಷಿಸಿದರು
ಗುಡಿಬಂಡೆ ತಾಲ್ಲೂಕು ಆಸ್ಪತ್ರೆಯಲ್ಲಿರುವ ಮೃತ ಲಕ್ಷ್ಮಯ್ಯ ಅವರ ಮೃತದೇಹವನ್ನು ತಹಶೀಲ್ದಾರ್ ಮುನಿರಾಜು ವೀಕ್ಷಿಸಿದರು   

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ಯರಲಕ್ಕೇನಹಳ್ಳಿಯ ರೈತ ಲಕ್ಷ್ಮಯ್ಯ (55) ಅವರು ಮಂಗಳವಾರ ಬೆಳಿಗ್ಗೆ ಸುಮಾರಿಗೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಒಬ್ಬ ಮಗ, ಮೂರು ಪುತ್ರಿಯರಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ಲಕ್ಷ್ಮಯ್ಯ ಅವರ ಪತ್ನಿ ತೀರಿಹೋಗಿದ್ದರು.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗುಡಿಬಂಡೆ ತಹಶೀಲ್ದಾರ್ ಮುನಿರಾಜು, ‘ಮೃತ ಲಕ್ಷ್ಮಯ್ಯ ಅವರಿಗೆ ಎರಡೂವರೆ ಎಕರೆ ಜಮೀನಿದೆ. ಇತ್ತೀಚೆಗೆ ಕೊಳವೆಬಾವಿ ವಿಫಲಗೊಂಡಿತ್ತು. ಜತೆಗೆ ಕೆಲವರ ಬಳಿ ಕೈಸಾಲ ಕೂಡ ಮಾಡಿದ್ದರು’ ಎಂದು ಮೃತರ ಸಹೋದರ ಹೇಳಿಕೆ ನೀಡಿದ್ದಾರೆ. ಸಾವಿನ ನಿಖರ ಕಾರಣ ತನಿಖೆಯ ನಂತರವಷ್ಟೇ ತಿಳಿದು ಬರಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.