
ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ಟಿ.ಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮದ ಅಡಿಯಲ್ಲಿ ಹರಿದ್ವರ್ಣ ಇಕೋ ಕ್ಲಬ್ ವತಿಯಿಂದ ಆಹಾರಮೇಳ ಏರ್ಪಡಿಸಲಾಗಿತ್ತು.
ಸಮತೋಲನ ಆಹಾರದ ಬಗ್ಗೆ ಜ್ಞಾನವನ್ನು ಬೆಳೆಸುವ ದೃಷ್ಟಿಯಿಂದ ಮಕ್ಕಳು ವಿವಿಧ ಬಗೆಯ ಪೋಷಕಾoಶಯುಕ್ತ ಆಹಾರ ತಯಾರಿಸಿ ಆಹಾರ ಮೇಳದಲ್ಲಿ ಪ್ರದರ್ಶನ ಮಾಡಿದರು. ತಾವು ತಯಾರಿಸಿದ ಆಹಾರದಲ್ಲಿ ಯಾವ ಪೋಷಕಾoಶ ಇದೆ ಮತ್ತು ಅದನ್ನು ತಿನ್ನುವುದರಿಂದ ದೇಹಕ್ಕೆ ಆಗುವ ಲಾಭಗಳ ಬಗ್ಗೆ ಮಕ್ಕಳು ತಿಳಿಸಿಕೊಟ್ಟರು.
ಕೈವಾರ ಕ್ಲಸ್ಟರ್ ಸಿಆರ್ಪಿ ಎಜಾಜ್ ಬೇಗ್, ಎಸ್ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಮುಖ್ಯಶಿಕ್ಷಕಿ ಕೆ.ಲಕ್ಷ್ಮಿ, ಸಹಶಿಕ್ಷಕಿ ಶುಭಲಕ್ಷ್ಮಿ, ನಳಿನಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.