ADVERTISEMENT

ಗೌರಿಬಿದನೂರು | ಆಕಸ್ಮಿಕ ಬೆಂಕಿ: ಸೋಫಾ ಅಂಗಡಿ ಭಸ್ಮ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:03 IST
Last Updated 28 ನವೆಂಬರ್ 2025, 5:03 IST
ಗೌರಿಬಿದನೂರು ನಗರದ ಕೆಎಸ್ಆರ್‌ಟಿಸಿ ಬಸ್ ಡಿಪೊ ಮುಂಭಾಗದ ಸೋಫಾ ಅಂಗಡಿಗೆ ತಗುಲಿದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ
ಗೌರಿಬಿದನೂರು ನಗರದ ಕೆಎಸ್ಆರ್‌ಟಿಸಿ ಬಸ್ ಡಿಪೊ ಮುಂಭಾಗದ ಸೋಫಾ ಅಂಗಡಿಗೆ ತಗುಲಿದ ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ   

ಗೌರಿಬಿದನೂರು: ಇಲ್ಲಿನ ಕೆಎಸ್ಆರ್‌ಟಿಸಿ ಬಸ್ ಡಿಪೊ ಮುಂಭಾಗದಲ್ಲಿರುವ ಸೋಫಾಸೆಟ್ ಮಳಿಗೆಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೋಫಾ ಸೆಟ್‌ಗಳು ಆಹುತಿಯಾಗಿವೆ. 

ಅಂಗಡಿಯಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಸುಡುವಾಗ ಬೆಂಕಿಯು ಅಂಗಡಿಯಲ್ಲಿದ್ದ ವಸ್ತುಗಳಿಗೆ ತಗುಲಿದೆ. ಈ ಮಳಿಗೆಯು ನಗರಸಭೆಯಿಂದ ಪರವಾನಗಿ ಪಡೆದಿರಲಿಲ್ಲ. ಪರವಾನಗಿ ಪಡೆದಿದ್ದರೆ, ಸಾಲ ಅಥವಾ ಸರ್ಕಾರದಿಂದ ಅನುಕೂಲ ಪಡೆಯಬಹುದಿತ್ತು. ನಗರದಲ್ಲಿರುವ ಅಂಗಡಿ ಮಾಲೀಕರು ತಪ್ಪದೆ ಪರವಾನಗಿ ಪಡೆದುಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಕೆ.ಜಿ. ರಮೇಶ್ ತಿಳಿಸಿದರು. .

ಮಾಲೀಕ ಶೌಕತ್ ಖಾನ್ ಮಾತನಾಡಿ, ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ನಿರುಪಯುಕ್ತ ವಸ್ತುಗಳನ್ನು ಮಳಿಗೆ ಹೊರಗೆ ಸುಡುತ್ತಿದ್ದರು. ಈ ಬೆಂಕಿ ಅಂಗಡಿಗೆ ವ್ಯಾಪಿಸಿದ್ದು, ಅಂಗಡಿಯಲ್ಲಿದ್ದ ₹80 ಲಕ್ಷ ಬೆಲೆ ಬಾಳುವ ಸೋಫಾಗಳು ಮತ್ತು ಒಂದು ಹೊಸ ಬುಲೆಟ್ ಆಹುತಿಯಾಗಿದೆ ಎಂದು ಅಳಲು ತೋಡಿಕೊಂಡರು.

ADVERTISEMENT

ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. 

ಗೌರಿಬಿದನೂರು ನಗರದ ಕೆಎಸ್ಆರ್‌ಟಿಸಿ ಬಸ್ ಡಿಪೊ ಮುಂಭಾಗದ ಸೋಫಾ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸೋಫಾಗಳು ಸುಟ್ಟು ಭಸ್ಮವಾದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.