ADVERTISEMENT

ಚಿಕ್ಕಬಳ್ಳಾಪುರ: ಓಂಶಕ್ತಿ ಯಾತ್ರೆಗೆ ಸಚಿವರ ಸಂಬಂಧಿ ಬಸ್‌ ವ್ಯವಸ್ಥೆ!

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:48 IST
Last Updated 11 ಜನವರಿ 2022, 7:48 IST
ಚಿಂತಾಮಣಿಯಿಂದ ತಮಿಳುನಾಡಿನ ಓಂ ಶಕ್ತಿ ಅಮ್ಮನ ದೇವಾಲಯದ ಯಾತ್ರೆಗೆ ಹೊರಟು ನಿಂತ ಬಸ್‌
ಚಿಂತಾಮಣಿಯಿಂದ ತಮಿಳುನಾಡಿನ ಓಂ ಶಕ್ತಿ ಅಮ್ಮನ ದೇವಾಲಯದ ಯಾತ್ರೆಗೆ ಹೊರಟು ನಿಂತ ಬಸ್‌   

ಚಿಂತಾಮಣಿ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರ ಭಾವಮೈದಹಾಗೂ ಬಿಜೆಪಿ ಮುಖಂಡ ಕೋನಪಲ್ಲಿ ಸತ್ಯನಾರಾಯಣರೆಡ್ಡಿ ಸೋಮವಾರ ಎಂಟು ಬಸ್‌ಗಳಲ್ಲಿ ನೂರಾರು ಜನರನ್ನು ಓಂಶಕ್ತಿ ಯಾತ್ರೆಗೆ ತಮಿಳುನಾಡಿಗೆ ಕಳಿಸಿದರು.

ತಾಲ್ಲೂಕಿನ ಬೂರಗಮಾಕಲಹಳ್ಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ಬಸ್‌ಗಳಿಗೆ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಸತ್ಯನಾರಾಯಣರೆಡ್ಡಿಚಾಲನೆ ನೀಡಿದರು. ಅವರು ಉಚಿತವಾಗಿ ವ್ಯವಸ್ಥೆ ಮಾಡಿದ ಎಂಟು ಬಸ್‌ಗಳಲ್ಲಿ ನೂರಾರು ಮಾಲಧಾರಿಗಳು ತಮಿಳುನಾಡಿನ ಓಂ ಶಕ್ತಿ ಅಮ್ಮನವರ ದೇವಾಲಯಕ್ಕೆ ತೆರಳಿದರು.

‘ಓಂಶಕ್ತಿ ಅಮ್ಮನವರ ದೇವಾಲಯಕ್ಕೆ ಕ್ಷೇಮವಾಗಿ ಹೋಗಿ ಬಂದು ಆಶೀರ್ವಾದ ಮಾಡಬೇಕು. ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಮಾರ್ಗಸೂಚಿ ಪಾಲಿಸಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

ಬಿಜೆಪಿ ತಾ. ಘಟಕದ ಅಧ್ಯಕ್ಷ ಶಿವಾರೆಡ್ಡಿ, ನಗರ ಘಟಕ ಅಧ್ಯಕ್ಷ ಮಹೇಶ್ ಬೈ, ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಆಂಜನೇಯರೆಡ್ದಿ, ಜಿಲ್ಲಾ ಕಾರ್ಯದರ್ಶಿ ಗೊವಿಂದರಾಜು, ಮುಖಂಡರಾದ ಕುರುಬೂರು ರಾಜಣ್ಣ, ನಾರಾಯಣರೆಡ್ದಿ, ಮನೋಹರೆಡ್ದಿ, ಕೆ. ಶ್ರೀನಿವಾಸ್, ಗಾಜಲು ಶಿವ, ಕೈವಾರ ಜಯರಾಮ್, ಬೂರುಗಮಾಕಲಹಳ್ಳಿ ಬೈರೆಗೌಡ, ಮಾಳಪ ಶಿವಾರೆಡ್ಡಿ, ವಿ.ಎಲ್.ಕೃಷ್ಣಸ್ವಾಮಿ ಮತಿತ್ತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.