ಬಾಗೇಪಲ್ಲಿ: ಸೌಹಾರ್ದ ಮತ್ತು ಭಾವೈಕ್ಯ ಪ್ರತೀಕ ಸಾರುವ ಮೊಹರಂ ಪಟ್ಟಣ ಹಾಗೂ ತಾಲ್ಲೂಕಿನ ಗ್ರಾಮಗಳಲ್ಲಿ ಹಿಂದೂ, ಮುಸ್ಲಿಮರು ವಿಜೃಂಭಣೆಯಿಂದ ಆಚರಿಸಿದರು.
ಮೊಹರಂ ಆಚರಣೆ ತ್ಯಾಗ ಮತ್ತು ಬಲಿದಾನದ ಸಂಕೇತ. ಗ್ರಾಮೀಣ ಪ್ರದೇಶದಲ್ಲಿ ಬಾಬಯ್ಯನ ಹಬ್ಬ ಎಂದರೆ ಹಿಂದೂ, ಮುಸ್ಲಿಂ ಸಮುದಾಯಗಳಿಗೆ ಸಡಗರ ಹಬ್ಬ. ಮೊಹರಂ ಹಬ್ಬ ತನ್ನ ಹಿಂದಿನ ಪರಂಪರೆ ಹಾಗೂ ಸಾಂಸ್ಕೃತಿಕ ವೈಭವ ನೆನಪಿಸಲಿದೆ.
ಪಟ್ಟಣದ ಭೈಲಾಂಜನೇಯಸ್ವಾಮಿ ದೇವಸ್ಥಾನದ ಚಾವಡಿ, ಮಲ್ಲಸಂದ್ರ, ನಾರೇಮದ್ದೇಪಲ್ಲಿ, ಮಾರ್ಗಾನಕುಂಟೆ, ಗೂಳೂರು, ದೇವಿಕುಂಟೆ ಸೇರಿದಂತೆ ಬಹುತೇಕ ಗ್ರಾಮಗಳ ಚಾವಡಿಗಳಲ್ಲಿ ಪಂಜುಗಳನ್ನು ಕೂರಿಸಲಾಯಿತು. ಚಾವಡಿಗಳಿಗೆ ಹೂವಿನ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿ ಪೂಜಿಸಲಾಯಿತು.
ಮೊಹರಂ ಆಚರಣೆ ಸಮಿತಿ ಮುಖಂಡರಾದ ಬಾಬಾಜಾನ್, ಬಾಬು, ರೋಹಿದ್, ಜಿ.ಎಂ.ರಾಮಕೃಷ್ಣಪ್ಪ, ಇಸ್ಮಾಯಿಲ್ ಸಾಬ್ ಖಾದ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.