ADVERTISEMENT

ತಂದೆ ಹತ್ಯೆಗೇ ಸುಪಾರಿ‌ ನೀಡಿದ್ದ ಮಗ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 3:42 IST
Last Updated 25 ಜೂನ್ 2021, 3:42 IST
ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತಂದು ಪರಿಶೀಲನೆ ‌ನಡೆಸಿದ ಪೊಲೀಸರು
ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆತಂದು ಪರಿಶೀಲನೆ ‌ನಡೆಸಿದ ಪೊಲೀಸರು   

ಗೌರಿಬಿದನೂರು: ತಾಲ್ಲೂಕಿನ ಜೋಡಿಬಿಸಲಹಳ್ಳಿಯಲ್ಲಿ ಜೂನ್ 14ರಂದು‌ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿ.ಎನ್. ಶ್ರೀನಿವಾಸಮೂರ್ತಿ (59) ಕೊಲೆಯಾದವರು.

ಅವರ ಹಿರಿಯ ‌ಮಗನಾದ ರೋಹಿತ್ ತನ್ನ ಸ್ನೇಹಿತರಾದ ರಂಗನಾಥ್ ಹಾಗೂ ಶ್ರಾವಂಡಹಳ್ಳಿಯ ರವಿಕುಮಾರ್‌ಗೆ ತನ್ನ ತಂದೆಯನ್ನು ಹತ್ಯೆ ಮಾಡುವಂತೆ ₹ 1 ಲಕ್ಷ ಸುಪಾರಿ‌ ನೀಡಿದ್ದ. ಬಳಿಕ ಈ ಮೂವರು ಗ್ರಾಮದ ಸರ್ಕಾರಿ‌ ಶಾಲಾ ಆವರಣದಲ್ಲಿ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶ್ರೀನಿವಾಸಮೂರ್ತಿ ಎಂದಿನಂತೆ ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಆಗ ರಂಗನಾಥ್ ‌ಮತ್ತು ರವಿಕುಮಾರ್ ಹೊಂಚು ಹಾಕಿ ಕಬ್ಬಿಣದ ರಾಡ್‌ನಿಂದ ಅವರ ತಲೆಗೆ ಹೊಡೆದು‌ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಗ್ರಾಮಾಂತರ ‌ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.