ಚಿಕ್ಕಬಳ್ಳಾಪುರ: ನಗರದ ಐತಿಹಾಸಿಕ ಹಜರತ್ ಮಿಸ್ಕಿನ್ ಷಾ ಸೈಲಾನಿ ಅವರ ಗಂಧದ ಅಭಿಷೇಕ ಹಾಗೂ ಉರುಸ್ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಬುಧವಾರ ರಾತ್ರಿ ಆಚರಿಸಲಾಯಿತು.
ಗುಲಾಮ ಏ ಮಿಸ್ಕಿನ್ ಹಜರತ್ ಅಸ್ಮತ್ ಉಲ್ಲಾ ಅವರ ವಿಶೇಷ ಪ್ರಾರ್ಥನೆಯೊಂದಿಗೆ ಗಂಧದ ಅಭಿಷೇಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ದರ್ಗಾ ಸಮಿತಿ ಮುಖ್ಯಸ್ಥ ಎಸ್. ಮುಬಾರಕ್, ಸಿ.ಎಂ. ನೂರುಲ್ಲಾ, ಫಯಾಜ್, ಮುಜಾವರ ಅನ್ವರ್, ಶಬ್ಬೀರ್, ಆಸಿಫ್, ಆಲಿಂ ಸೈಲಾನಿ, ಸಿ.ಎಂ. ಸುಹೇಲ್, ನಗರಸಭೆ ಸದಸ್ಯ ಎಸ್.ಎಂ. ರಫೀಕ್, ಜಾಫರ್, ಅಫ್ಜಲ್, ರಿಯಾಜ್ ಖದಿರಿ,
ಎಂ.ಎಂ. ಬಾಷಾ, ಯಾಕೋಬ್ ಶರೀಫ್, ಸಾದಿಕ್ ಖಾನ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.