ADVERTISEMENT

Photos: ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆ, ರಸ್ತೆ ಮೇಲೆಲ್ಲ ನೀರು- ವಾಹನ ಸವಾರರ ಪರದಾಟ

ರಾತ್ರಿ ಸುರಿದ ಭಾರಿ ಮಳೆಗೆ ಚಿಕ್ಕಬಳ್ಳಾಪುರ ಎಂಜಿ ರಸ್ತೆ ಮೂಲಕ ಗೌರಿಬಿದನೂರಿಗೆ ಹೋಗುವ ರಸ್ತೆ ಮಧ್ಯೆ ನೀರು ತುಂಬಿಕೊಂಡು ಕೆರೆಯಾಗಿ ಮಾರ್ಪಟ್ಟಿತ್ತು. ರಸ್ತೆ ಮೇಲೆಲ್ಲ ನೀರು ತುಂಬಿಕೊಂಡಿದ್ದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.ಕೆಲವು ಗಂಟೆಗಳ ಕಾಲ ವಾಹನಗಳು ಸಂಚರಿಸಲು ಆಗಲಿಲ್ಲ.ಚಿಕ್ಕಬಳ್ಳಾಪುರ ನಗರಕ್ಕೆ ಹೊಂದುಕೊಂಡಿರುವ ಡಿವೈನ್ ಸಿಟಿ ಯಲ್ಲಿ ನೂರ ಐವತ್ತು ಮನೆಗಳು ವಾಸವಿದ್ದು ಮನೆ ಮನೆಯೊಳಗೆ ನೀರು ತುಂಬಿಕೊಂಡಿದ್ದು ಮನೆಯಿಂದ ಹೊರ ಬರಲು ಹರಸಾಹಸಪಟ್ಟರು.

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 12:13 IST
Last Updated 24 ಅಕ್ಟೋಬರ್ 2021, 12:13 IST
ಭಾರಿ ಮಳೆಯಿಂದಾಗಿ ಉಂಟಾಗಿರುವ ಅವಘಡ
ಭಾರಿ ಮಳೆಯಿಂದಾಗಿ ಉಂಟಾಗಿರುವ ಅವಘಡ   
ರಸ್ತೆ ಮಧ್ಯೆ ನೀರು ತುಂಬಿಕೊಂಡಿದ್ದರಿಂದಾಗಿ ವಾಹನವನ್ನು ತಳ್ಳುತ್ತಾ ಸಾಗಿದ ಯುವತಿ
ಚಿಕ್ಕಬಳ್ಳಾಪುರ ಎಂಜಿ ರಸ್ತೆ ಮೂಲಕ ಗೌರಿಬಿದನೂರಿಗೆ ಹೋಗುವ ರಸ್ತೆ ಮಧ್ಯೆ ನೀರು ತುಂಬಿಕೊಂಡು ಕೆರೆಯಾಗಿ ಮಾರ್ಪಟ್ಟಿತ್ತು.
ರಸ್ತೆ ಮೇಲೆ ನೀರು ತುಂಬಿದ್ದರಿಂದ ಸಾಲುಗಟ್ಟಿ ನಿಂತಿದ್ದ ವಾಹನಗಳು
ರಸ್ತೆ ಮಧ್ಯೆ ನೀರು ತುಂಬಿಕೊಂಡಿದ್ದು, ಹುಡುಗನೊಬ್ಬ ತನ್ನ ಸೈಕಲ್ಲನ್ನು ನೀರಿನಲ್ಲಿ ತೊಳೆಯುತ್ತಿರುವ ದೃಶ್ಯ ಕಂಡುಬಂತು.
ರಸ್ತೆ ಮಧ್ಯೆ ನಿಂತಿರುವ ನೀರಿನಲ್ಲಿ ಸೈಕಲ್ ತೊಳೆಯುತ್ತಿದ್ದ ಬಾಲಕ
ನೀರಿನಲ್ಲೇ ಚಲಿಸುತ್ತಿದ್ದ ವಾಹನಗಳು
ಕೆರೆಯಂತಾಗಿದ್ದ ರಸ್ತೆಯಲ್ಲೇ ನಡೆದು ಹೋಗುತ್ತಿದ್ದ ಜೋಡಿ
ರಭಸವಾಗಿ ರಸ್ತೆಯಿಂದ ಪಕ್ಕಕ್ಕೆ ಹರಿಯುತ್ತಿದ್ದ ನೀರನ್ನು ನೋಡುತ್ತಿದ್ದ ಸಾರ್ವಜನಿಕರು
ನೀರು ನಿಂತಿದ್ದ ಪರಿಣಾಮ ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಪಲ್ಟಿ ಹೊಡೆದಿರುವ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.