ADVERTISEMENT

ಜೆಡಿಎಸ್‌ ಗೆಲುವಿಗೆ ಶ್ರಮಿಸಿ: ಧರ್ಮೇಗೌಡ

ಜಾತ್ಯತೀತ ಜನತಾ ದಳದಿಂದ ಬಿ.ಎಚ್.ಹರೀಶ್ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 9:14 IST
Last Updated 24 ಏಪ್ರಿಲ್ 2018, 9:14 IST
ಆಸ್ತಿ – ಸಾಲ
ಆಸ್ತಿ – ಸಾಲ   

ಚಿಕ್ಕಮಗಳೂರು: ‘ಹೋರಾಟ ಮಾಡಿ ಸಾಕಾಗಿದೆ. ಜೆಡಿಎಸ್‌ ಗೆಲುವಿಗೆ ಕಾರ್ಯ ಕರ್ತರು ಟೊಂಕಕಟ್ಟಿ ನಿಲ್ಲಬೇಕು’ ಎಂದು ಜೆಡಿಎಸ್‌ ಮುಖಂಡ ಎಸ್.ಎಲ್.ಧರ್ಮೇಗೌಡ ಹೇಳಿದರು.

ಜೆಡಿಎಸ್‌ ಅಭ್ಯರ್ಥಿ ಬಿ.ಎಚ್.ಹರೀಶ್ ಅವರು ನಾಮಪತ್ರ ಸಲ್ಲಿಸಿದ ಬಳಿಕ ಧರ್ಮೇಗೌಡ ಅವರು ಹನುಮಂತಪ್ಪ ವೃತ್ತದಲ್ಲಿ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದರು. ‘ಈ ಕ್ಷೇತ್ರದಲ್ಲಿ ಬಿಜೆಪಿಯವರ ಅಹಂ ಕಾರಕ್ಕೆ ಕೊನೆ ಹಾಡಬೇಕು. ಈ ಕ್ಷೇತ್ರದಲ್ಲಿ ಬದಲಾವಣೆ ಶತ ಸಿದ್ಧ’ ಎಂದು ಹೇಳಿದರು.

‘ಕಣಿವೆಯ ಕೆಳಭಾಗದಲ್ಲಿ ಕುಡಿ ಯುವ ನೀರಿಗೆ ತೊಂದರೆಯಾಗಿದೆ. ಯಾವುದೇ ನೀರಾವರಿ ಸೌಲಭ್ಯ ಗಳು ಇಲ್ಲ. ಕುಮಾರಸ್ವಾಮಿ ಮುಖ್ಯ ಮಂತ್ರಿಯಾದರೆ ನೀರಿನ ಸೌಲಭ್ಯಕ್ಕೆ ಪ್ರಯತ್ನ ಮಾಡುತ್ತಾರೆ. ಜನರು ಜೆಡಿಎಸ್‌ ಬೆಂಬಲಸಬೇಕು’ ಎಂದು ಅವರು ಕೋರಿದರು.

ADVERTISEMENT

ಪಕ್ಷದ ಅಭ್ಯರ್ಥಿ ಹರೀಶ್ ಮಾತ ನಾಡಿ, ‘ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಖಚಿತ ಹಾಗೂ ಕುಮಾರ
ಸ್ವಾಮಿ ಅವರು ಮುಖ್ಯಮಂತ್ರಿ ಯಾಗುವುದು ನಿಜ. ಕ್ಷೇತ್ರದಲ್ಲಿ ಈವರೆಗೂ 3 ಬಾರಿ ಶಾಸಕರಾದವರು ಸಖರಾಯಪಟ್ಟಣ ಮತ್ತು ಲಕ್ಯಾ ಹೋಬಳಿಯ ನೀರಿನ ತೊಂದರೆ ನಿವಾರಿಸುವಲ್ಲಿ ಸೋತಿ ದ್ದಾರೆ. ಕರಗಡ ಕಾಮಗಾರಿ ಅವೈಜ್ಞಾನಿ ಕವಾಗಿದೆ. ಈ ಕ್ಷೇತ್ರದ ಜನ ಅವರನ್ನು ಸೋಲಿಸುವ ಮೂಲಕ ಬುದ್ಧಿ ಕಲಿಸ ಬೇಕು. ಅವರುಗಳ ಬಳಿ ಹಣವಿದೆ, ಆದರೆ ಜೆಡಿಎಸ್ ಜೊತೆ ಜನರ ಬಲವಿದೆ’ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಕನಸನ್ನು ಸಾರ್ವಜನಿಕರು ಕಾಣುತ್ತಿದ್ದಾರೆ. ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ’ ಎಂದು ಅವರು ಹೇಳಿದರು.

‘ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ಪೊಳ್ಳು ಭರವಸೆ ನೀಡುತ್ತಿದೆ. ಪೊಳ್ಳು ಭರವಸೆ ನೀಡುವವರನ್ನು ಮನೆಗೆ ಕಳುಹಿಸಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕೊನೆ ಗಾಣಿಸಬೇಕು’ ಎಂದು ಹೇಳಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ‘ಜೆಡಿಎಸ್ ಅಭ್ಯರ್ಥಿಯನ್ನು ತಟಸ್ಥಗೊ ಳಿಸಲಾಗಿದೆ ಎಂದು ಕೆಲವು ಪಕ್ಷದ ಮುಖಂಡರು ಹೇಳಿಕೊಂಡು ತಿರುಗಾ ಡುತ್ತಿದ್ದಾರೆ. ಧೈರ್ಯವಿದ್ದರೆ ಆ ವಿಷಯ ವನ್ನು ತಮ್ಮ ಮುಂದೆ ಹೇಳಲಿ’ ಎಂದು ಸವಾಲು ಹಾಕಿದರು.

‘ನಗರದ ಎಂ.ಜಿ.ರಸ್ತೆ, ಐ.ಜಿ. ಮತ್ತು ಮಾರುಕಟ್ಟೆ ರಸ್ತೆ ದುರಸ್ತಿಯಲ್ಲಿ ಹಣ ಅಪವ್ಯಯವಾಗಿದೆ. ಕೆರೆಕಟ್ಟೆ ಸರಿಮಾಡುತ್ತೇವೆಂದು ಹಣವನ್ನು ಹಾಳು ಮಾಡಲಾಗಿದೆ’ ಎಂದು ಆರೋಪಿಸಿದರು.

‘ಪ್ರತಿಯೊಬ್ಬ ಕಾರ್ಯಕರ್ತ ಈ ಕ್ಷೇತ್ರದ ಪ್ರತಿ ಮನೆಗೆ ತೆರಳಿ ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ತಿಳಿಸಿದರು.

ಅಲ್ಪಸಂಖ್ಯಾತ ವಿಭಾಗದ ನಿಸಾರ್‍ಅ ಹಮದ್ ಮಾತನಾಡಿ, ಈ ಬಾರಿ ಅಲ್ಪಸಂಖ್ಯಾತ ಮತಗಳು ಜಾತ್ಯತೀತ ಜನತಾದಳಕ್ಕೆ ಹರಿದು ಬರಲಿದೆ ಎಂದರು.ಮುಖಂಡರಾದ ಎಂ.ಡಿ.ರಮೇಶ್, ಹೊಲದಗದ್ದೆ ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.