ADVERTISEMENT

ಬೈಕು– ಕಾರು ಡಿಕ್ಕಿ: ಹೆಡ್‌ ಕಾನ್‌ಸ್ಟೆಬಲ್‌ ಸಾವು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 2:39 IST
Last Updated 3 ಡಿಸೆಂಬರ್ 2020, 2:39 IST
ಸಿದ್ದರಾಮಪ್ಪ
ಸಿದ್ದರಾಮಪ್ಪ   

ಚಿಕ್ಕಮಗಳೂರು: ತಾಲ್ಲೂಕಿನ ಹಿರೇಗೌಜ ಸಮೀಪ ಕೆ.ಎಂ ರಸ್ತೆಯಲ್ಲಿಬುಧವಾರ ರಾತ್ರಿ ಕಾರು ಮತ್ತು ಬೈಕು ಮುಖಾಮುಖಿ ಡಿಕ್ಕಿಯಾಗಿ ಬೈಕ್‌ ಸವಾರ ಹೆಡ್‌ ಕಾನ್‌ಸ್ಟೆಬಲ್‌ ಟಿ.ಎಸ್‌. ಸಿದ್ದರಾಮಪ್ಪ(48) ಸಾವಿಗೀಡಾಗಿದ್ದಾರೆ.

ಸಿದ್ದರಾಮಪ್ಪ ಅವರು ಕರ್ತವ್ಯ ಮುಗಿಸಿ ಸಖರಾಯಪಟ್ಟಣದಿಂದ ಚಿಕ್ಕಮಗಳೂರಿಗೆ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕಾರು ಕಡೂರು ಕಡೆಗೆ, ಬೈಕು ಚಿಕ್ಕಮಗಳೂರು ಕಡೆಗೆ ಸಂಚರಿಸುತ್ತಿತ್ತು. ಅವಘಡದಲ್ಲಿ ಕಾರು ಮತ್ತು ಬೈಕು ಜಖಂ ಗೊಂಡಿವೆ.
‘ಸಿದ್ದರಾಮಪ್ಪ ಅವರು ಇನ್ನು ಎರಡ್ಮೂರು ದಿನದಲ್ಲಿ ಎಎಸ್‌ಐ (ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌) ಹುದ್ದೆಗೆ ಬಡ್ತಿಯಾಗುವ ನಿರೀಕ್ಷೆಯಲ್ಲಿದ್ದರು. ಚಿಕ್ಕಮಗಳೂರಿನ ಕಲ್ದೊಡ್ಡಿಯ ಪೊಲೀಸ್‌ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೂಲತಃ ಅಜ್ಜಂಪುರ ತಾಲ್ಲೂಕಿನ ತಮ್ಮಟದಹಳ್ಳಿಯವರು‘ ಎಂದು ಅವರ ಸಹಪಾಠಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.