ADVERTISEMENT

ಕಡೂರು: ವಯನಾಡಿಗೆ 2 ಆಂಬ್ಯುಲೆನ್ಸ್, ಒಂದು ಟನ್ ತರಕಾರಿ ಹಾಗೂ ದಿನಬಳಕೆ ವಸ್ತುಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 13:51 IST
Last Updated 4 ಆಗಸ್ಟ್ 2024, 13:51 IST
ಕಡೂರಿನ ಆಂಬ್ಯುಲೆನ್ಸ್ ಚಾಲಕರ ರೋಡ್ ಸೇಫ್ಟಿ ಸಂಘದಿಂದ ವಯನಾಡಿಗೆ ಎರಡು ಆಂಬ್ಯುಲೆನ್ಸ್‌ಗಳನ್ನು ಬೀಳ್ಕೊಡಲಾಯಿತು
ಕಡೂರಿನ ಆಂಬ್ಯುಲೆನ್ಸ್ ಚಾಲಕರ ರೋಡ್ ಸೇಫ್ಟಿ ಸಂಘದಿಂದ ವಯನಾಡಿಗೆ ಎರಡು ಆಂಬ್ಯುಲೆನ್ಸ್‌ಗಳನ್ನು ಬೀಳ್ಕೊಡಲಾಯಿತು   

ಕಡೂರು: ಇಲ್ಲಿನ ಅಖಿಲ ಕರ್ನಾಟಕ ಆಂಬ್ಯುಲೆನ್ಸ್ ರೋಡ್ ಸೇಫ್ಟಿ ಸಂಘದ ವತಿಯಿಂದ ಭಾನುವಾರ ಎರಡು ಆಂಬ್ಯುಲೆನ್ಸ್, ಒಂದು ಟನ್ ತರಕಾರಿ ಹಾಗೂ ದಿನಬಳಕೆ ವಸ್ತುಗಳನ್ನು ಕೇರಳದ ವಯನಾಡಿಗೆ ಕಳುಹಿಸಲಾಯಿತು.

ಶಾಸಕರ ಆಪ್ತ ಕಾರ್ಯದರ್ಶಿ ಪ್ರಕಾಶ್ ಮಾತನಾಡಿ, ‘ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತೊಂದರೆಗೀಡಾದವರ ನೆರವಿಗೆ ಕಡೂರಿನ ಆಂಬ್ಯುಲೆನ್ಸ್ ಚಾಲಕರು ಧಾವಿಸುತ್ತಿರುವುದು ಇತರರಿಗೆ ಅನುಕರಣೀಯ’ ಎಂದರು.

ವಿನಯ್ ವಳ್ಳು, ಅಜೀಜ್, ಕ್ಯಾಂಟೀನ್ ಮಂಜು, ಗೌಸ್ ಪೀರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.