ADVERTISEMENT

ಯೋಧನ ಶವ ಹುಟ್ಟೂರಿಗೆ ಇಂದು

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:43 IST
Last Updated 15 ಜೂನ್ 2022, 4:43 IST

ಬಾಳೆಹೊನ್ನೂರು: ಮಸೀಗದ್ದೆಯ ಯೋಧ ಗಣೇಶ್ ಅವರ ಮೃತದೇಹವನ್ನು ಬುಧವಾರ (ಜೂ.15) ಸಂಜೆ ವೇಳೆಗೆ ಹುಟ್ಟೂರಿಗೆ ತರಲಾಗುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ವಿಷಯ ತಿಳಿದ ತಕ್ಷಣ ಜಿಲ್ಲಾಡಳಿತವನ್ನು ಸಂಪರ್ಕಿಸಿ ಶವವನ್ನು ಹುಟ್ಟೂರಿಗೆ ತರುವ ಬಗ್ಗೆ ಮಾತುಕತೆ ನಡೆಸಿದ್ದೇನೆ. ಶವ ಪರೀಕ್ಷೆ ನಡೆದಿದ್ದು, ಅಲ್ಲಿಂದ ಬಿಹಾರದ ಬಾಗ್ದೂರ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ 12 ಗಂಟೆ ಸುಮಾರಿಗೆ ಮೃತದೇಹ ಬರಲಿದೆ. ಅಲ್ಲಿಂದ ಹಾಸನ, ಚಿಕ್ಕಮಗಳೂರು ಮೂಲಕ ರಸ್ತೆ ಮಾರ್ಗವಾಗಿ ಸಂಗಮೇಶ್ವರ ಪೇಟೆಗೆ 6 ಗಂಟೆ ವೇಳೆಗೆ ಬರಬಹುದು. ಸಮುದಾಯ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ನಂತರ ಸಕಲ ಸರ್ಕಾರಿ ಗೌರವದೊಂದಿಗೆ ಮಸೀಗದ್ದೆಯಲ್ಲಿ ಶವ ಸಂಸ್ಕಾರ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT