ನರಸಿಂಹರಾಜಪುರ: ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಶ್ವೇತಾ ಅವರು ಬಸ್ನಲ್ಲಿ ಕಳೆದುಕೊಂಡಿದ್ದ ಹೆಚ್ಚು ಬೆಲೆಯ ಮೊಬೈಲ್ ಫೋನ್ ಅನ್ನು ಹಿಂದಿರುಗಿಸುವ ಮೂಲಕ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಯಲ್ಲಾಲಿಂಗ ಪಾಟೀಲ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಶುಕ್ರವಾರ ಸಂಜೆ ಕರ್ತವ್ಯಮುಗಿಸಿ ಮುತ್ತಿನಕೊಪ್ಪಕ್ಕೆ ಬಸ್ನಲ್ಲಿ ತೆರಳಿದ್ದ ಶ್ವೇತಾ, ಬಸ್ ಇಳಿಯುವ ಅವಸರದಲ್ಲಿ ಮೊಬೈಟ್ ಬಿಟ್ಟಿದ್ದರು. ಆನಂತರ ಡಾ.ಶ್ವೇತಾ ತಮ್ಮ ಮೊಬೈಲ್ಗೆ ಕರೆಮಾಡಿದಾಗ ಕಂಡಕ್ಟರ್ ಕರೆ ಸ್ವೀಕರಿಸಿ ಬಸ್ನಲ್ಲಿಯೇ ಮೊಬೈಲ್ ಇದ್ದು, ಶನಿವಾರ ಹಿಂದಿರುಗಿಸುವುದಾಗಿ ತಿಳಿಸಿದ್ದರು. ಬಂದ ಕರೆಗಳನ್ನು ಸ್ವೀಕರಿಸಿ ಬಸ್ನಲ್ಲಿ ಮೊಬೈಲ್ ಬಿಟ್ಟುಹೋಗಿರುವ ವಿಷಯ ತಿಳಿಸಿದ್ದರು.
ಯಲ್ಲಾಲಿಂಗ ಪಾಟೀಲ್ ವಿಜಯಪುರದವರಾಗಿದ್ದು, ಈ ಹಿಂದೆ ಚಿಕ್ಕಮಗಳೂರು ಡಿಪೊದಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಶಿವಮೊಗ್ಗ ಕೆಎಸ್ಆರ್ಟಿಸಿ ಡಿಪೊದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.