ADVERTISEMENT

ವಾಹನ ಚಾಲಕ ಸಾವು ಪ್ರಕರಣ: ಶೃಂಗೇರಿ ತಾಲ್ಲೂಕು ಕಚೇರಿ ಎಫ್‌ಡಿಎ ಶರತ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 14:15 IST
Last Updated 3 ಫೆಬ್ರುವರಿ 2022, 14:15 IST
ಟಿ.ಎಸ್‌. ಶರತ್‌ಕುಮಾರ್‌
ಟಿ.ಎಸ್‌. ಶರತ್‌ಕುಮಾರ್‌   

ಚಿಕ್ಕಮಗಳೂರು: ಶೃಂಗೇರಿ ವಾಹನ ಚಾಲಕ ನಿಗೂಢ ಸಾವಿನ ಪ್ರಕರಣದಲ್ಲಿ ಬಂಧಿತರಾಗಿರುವ ತಾಲ್ಲೂಕು ಕಚೇರಿಯ ಪ್ರಥಮದರ್ಜೆ ಸಹಾಯಕ (ಎಫ್‌ಡಿಎ) ಟಿ.ಎಸ್‌. ಶರತ್‌ಕುಮಾರ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಶರತ್‌ ವಿರುದ್ಧ ಶೃಂಗೇರಿ ಠಾಣೆಯಲ್ಲಿ ಐಪಿಸಿ 34 (ಅಪರಾಧ ಸಂಚು), 306 (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ವಿಚಾರವನ್ನು ಅವಲೋಕಿಸಿ ಶರತ್‌ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT