ADVERTISEMENT

ಕಡೂರು: ಮಸಣದ ಹಳ್ಳಕ್ಕೆ ಜಾರಿದ್ದ ಕಾರು, ಚಾಲಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:52 IST
Last Updated 10 ಆಗಸ್ಟ್ 2022, 4:52 IST

ಕಡೂರು: ತಾಲ್ಲೂಕಿನ ಪಿಳ್ಳೇನಹಳ್ಳಿ ಬಳಿ ಮಸಣದ ಹಳ್ಳಕ್ಕೆ ಜಾರಿದ್ದ ಕಾರು, ಚಾಲಕ ಕೇತುಮಾರನಹಳ್ಳಿಯ ಗಿರೀಶ್‌ ಅವರನ್ನು ಜೆಸಿಬಿ ಯಂತ್ರ ಬಳಸಿ ರಕ್ಷಣೆ ಮಾಡಲಾಗಿದೆ.

ಮಸಣದ ಹಳ್ಳ ರಭಸಾಗಿ ಹರಿಯುತ್ತಿದೆ. ಗಿರೀಶ್‌ ಅವರು ಕಾರಿನಲ್ಲಿ ಮಂಗಳವಾರ ಬೆಳಿಗ್ಗೆ ಪಿಳ್ಳೇನಹಳ್ಳಿ ಮಾರ್ಗವಾಗಿ ಸಖರಾಯಪಟ್ಟಣಕ್ಕೆ ಸಾಗುವಾಗ ಸೇತುವೆ ಮೇಲೆ ನೀರಿನ ಸೆಳೆತಕ್ಕೆ ಸಿಕ್ಕಿ ಕಾರು ಮುಳುಗಲಾರಂಭಿಸಿದೆ. ತಕ್ಷಣವೇ ಗಿರೀಶ್ ಮೊಬೈಲ್ ಫೋನ್‌ನಿಂದ ಸ್ನೇಹಿತರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಸ್ನೇಹಿತರು, ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಕಾರಿಗೆ ಹಗ್ಗ ಕಟ್ಟಿ ಜೆಸಿಬಿ ಯಂತ್ರದಿಂದ ದಡಕ್ಕೆ ಎಳೆಸಿದ್ದಾರೆ. ಕಾರು ಚಾಲಕ ಗಿರೀಶ್ ಸುರಕ್ಷಿತವಾಗಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಖರಾಯಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.