ಕಳಸ: ತಾಲ್ಲೂಕಿನ ಕವನಳ್ಳದಲ್ಲಿ ಗಿರಿಜನ ಮುಖಂಡ ಜಿ.ಪಿ.ಚಂದ್ರು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದರು.
ಬಿಜೆಪಿಯಲ್ಲಿ ಇದ್ದ ಅವರು ಹೊರನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರ ಪತ್ನಿ ಕವಿತಾ ಚಂದ್ರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು.
ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಅಂಶುಮಂತ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಚಂದ್ರು ಅಂತಹ ಮುಖಂಡರು ನಮಗೆ ಹೆಚ್ಚು ಪ್ರಸ್ತುತ ಎಂದರು.
ಸುಧೀರ್ ಕುಮಾರ್ ಮುರೋಳಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ರಕ್ಷಣೆಗಾಗಿ ಕಾನೂನು ಜಾರಿಗೆ ತಂದ ಕಾಂಗ್ರೆಸ್ ಪಕ್ಷಕ್ಕೆ ನೀವೆಲ್ಲರೂ ಸೇರುವುದು ಔಚಿತ್ಯಪೂರ್ಣ ಎಂದರು.
ಮುಖಂಡ ಹಿತ್ತಲಮಕ್ಕಿ ರಾಜೇಂದ್ರ, ರಫೀಕ್, ಬ್ಲಾಕ್ ಅಧ್ಯಕ್ಷ ಶ್ರೇಣಿಕ, ಚಂದ್ರು ಮಾತನಾಡಿದರು. ಮುಖಂಡರಾದ ಪುಷ್ಪಾ, ವೀರೇಂದ್ರ ಗೋರ್ಗಲ್, ರಾಮು, ವೀರೇಂದ್ರ, ವಿಶ್ವನಾಥ್, ಮಧು ಪ್ರಸಾದ್, ರವಿರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.