ADVERTISEMENT

ಚಿಕ್ಕಮಗಳೂರು: ಈಜಲು ಹೋದ ಬಾಲಕ ಕೆರೆ ಪಾಲು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 11:23 IST
Last Updated 25 ಅಕ್ಟೋಬರ್ 2021, 11:23 IST
   

ಚಿಕ್ಕಮಗಳೂರು: ನಗರದ ಕೆಂಪನಹಳ್ಳಿಯ ಚಂದ್ರಕಟ್ಟೆ ಕೆರೆಯಲ್ಲಿ ಈಜಲು ಹೋಗಿ ಬಾಲಕ ಶಿವಾಸ್‌ (12) ನೀರು ಪಾಲಾಗಿದ್ದಾನೆ.

ಲಕ್ಯಾಗ್ರಾಮದ ದಿವಂಗತ ಹುಲಿಯಪ್ಪ ಮತ್ತು ರಾಧಾ ದಂಪತಿ ಪುತ್ರನಾದ ಶಿವಾಸ್‌ ಕೆಂಪನಹಳ್ಳಿಯಲ್ಲಿ ಅಜ್ಜನ ಮನೆಯಲ್ಲಿ (ತಾಯಿಯ ತವರು ಮನೆ)ವಾಸ ಇದ್ದ. ಆರನೇ ತರಗತಿಯ ವಿದ್ಯಾರ್ಥಿ.ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹ ಹೊರತೆಗೆದಿದ್ದಾರೆ.

‘ಕೆರೆ ದಂಡೆಯಲ್ಲಿ ಬಾಲಕನ ಬಟ್ಟೆಗಳು ಸಿಕ್ಕಿವೆ. ಈಜಲು ಹೋಗಿ ನೀರು ಪಾಲಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.