ADVERTISEMENT

ಚಿಕ್ಕಮಗಳೂರು | ಕಾರು ಪಲ್ಟಿ: ಯುವಕ ಸಾವು, ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:27 IST
Last Updated 25 ಡಿಸೆಂಬರ್ 2025, 6:27 IST
<div class="paragraphs"><p>ಮೂಗ್ತಿಹಳ್ಳಿ ಬಳಿ ಗದ್ದೆಗೆ ಪಲ್ಟಿಯಾಗಿ ನುಜ್ಜುಗುಜ್ಜಾಗಿರುವ ಕಾರು</p></div>

ಮೂಗ್ತಿಹಳ್ಳಿ ಬಳಿ ಗದ್ದೆಗೆ ಪಲ್ಟಿಯಾಗಿ ನುಜ್ಜುಗುಜ್ಜಾಗಿರುವ ಕಾರು

   

ಚಿಕ್ಕಮಗಳೂರು: ಮೂಗ್ತಿಹಳ್ಳಿ ಸಮೀಪ ಬುಧವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಗದ್ದೆಗೆ ಉರುಳಿದೆ. ಕಾರಿನಲ್ಲಿದ್ದ ಯುವಕನೊಬ್ಬ ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ.

ಮೂಡಿಗೆರೆಯಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕಾರು, ಮೂಗ್ತಿಹಳ್ಳಿ ಕೆರೆಯ ಎದುರು ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಪಲ್ಟಿಯಾಗಿದೆ.

ADVERTISEMENT

ಅಪಘಾತದಲ್ಲಿ ಚಿಕ್ಕಮಗಳೂರಿನ ಮೊಹಿನ್ (19) ಮೃತಪಟ್ಟಿದ್ದು, ರಿಹಾನ್ (17), ಸತ್ಯಪಾಲ್(18), ಪೂರ್ಣ (18), ಶ್ರೇಯಸ್ (18), ರಘು (18) ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲರೂ ಚಿಕ್ಕಮಗಳೂರು ನಗರದವರಾಗಿದ್ದು, ಎಂಇಎಸ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.