ADVERTISEMENT

ಕೋವಿಡ್: ಒಬ್ಬರು ಸಾವು, 123 ಮಂದಿಗೆ ಸೋಂಕು ಪತ್ತೆ

ಕೋವಿಡ್‌: 130 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 16:18 IST
Last Updated 3 ಸೆಪ್ಟೆಂಬರ್ 2020, 16:18 IST

ಚಿಕ್ಕಮಗಳೂರು: ಕೋವಿಡ್‌ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. 123ಮಂದಿಗೆ ಸೋಂಕು ದೃಢಪಟ್ಟಿದ್ದು, 130ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರಿನ ದಂಟರಮಕ್ಕಿಯ 52 ವರ್ಷದ ಮಹಿಳೆ (ಪಿ– 361492), ಮೃತಪಟ್ಟವರು.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ತರೀಕೆರೆ– 36, ಚಿಕ್ಕಮಗಳೂರು– 32, ಕಡೂರು –29, ಶೃಂಗೇರಿ –11, ಎನ್‌.ಆರ್‌.ಪುರ ಮತ್ತು ಕೊಪ್ಪ– ತಲಾ 6, ಮೂಡಿಗೆರೆ– ಮೂವರಿಗೆ ಸೋಂಕು ಪತ್ತೆಯಾಗಿದೆ.

ADVERTISEMENT

ಜಿಲ್ಲೆಯಲ್ಲಿ 1349 ಸಕ್ರಿಯ ಪ್ರಕರಣಗಳು ಇವೆ. 2943 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 81ಮಂದಿ (ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಜಿಲ್ಲೆಯ ಇಬ್ಬರು ಸಹಿತ) ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. 1,377 ನಿಯಂತ್ರಿತ ವಲಯಗಳು ಇವೆ.

ಜಿಲ್ಲೆಯಲ್ಲಿ ಒಟ್ಟು: 4501

ದಿನದ ಏರಿಕೆ: 123

ಸಕ್ರಿಯ ಪ್ರಕರಣ: 1349

ದಿನದ ಇಳಿಕೆ: 8

ಗುಣಮುಖ: 2943

ದಿನದ ಏರಿಕೆ: 84

ಸಾವು: 81

ದಿನದ ಏರಿಕೆ: 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.