ADVERTISEMENT

ಒಬ್ಬರು ಸಾವು; 115 ಮಂದಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 16:58 IST
Last Updated 18 ಸೆಪ್ಟೆಂಬರ್ 2020, 16:58 IST

ಚಿಕ್ಕಮಗಳೂರು: ಕೋವಿಡ್‌-19 ಸೋಂಕು ತಗುಲಿದ್ದ ಒಬ್ಬರು ಸಾವಿಗೀಡಾಗಿದ್ದಾರೆ. ಶುಕ್ರವಾರ115 ಮಂದಿಗೆ ಸೋಂಕು ದೃಢಪಟ್ಟಿದ್ದು, 50 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರಿನ ವಿಜಯನಗರದ 46 ವರ್ಷದ ಮಹಿಳೆ (ಪಿ–502314) ಮೃತಪಟ್ಟವರು.

ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಕಡೂರು– 49, ತರೀಕೆರೆ– 30, ಚಿಕ್ಕಮಗಳೂರು– 25, ಮೂಡಿಗೆರೆ– 7, ಕೊಪ್ಪ– ನಾಲ್ಕು ಮಂದಿಗೆ ಸೋಂಕು ಪತ್ತೆಯಾಗಿದೆ.

ADVERTISEMENT

ಜಿಲ್ಲೆಯಲ್ಲಿ 1471 ಸಕ್ರಿಯ ಪ್ರಕರಣಗಳು ಇವೆ. 5292 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 107 ಮಂದಿ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. 2091 ನಿಯಂತ್ರಿತ ವಲಯಗಳು ಇವೆ.

ಪಟ್ಟಿ‌

ಜಿಲ್ಲೆಯಲ್ಲಿ ಒಟ್ಟು: 6920

ದಿನದ ಏರಿಕೆ: 115

ಸಕ್ರಿಯ ಪ್ರಕರಣ: 1471

ದಿನದ ಏರಿಕೆ: 101

ಗುಣಮುಖ: 5292

ದಿನದ ಏರಿಕೆ: 50

ಸಾವು:107

ದಿನದ ಏರಿಕೆ: 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.