ಚಿಕ್ಕಮಗಳೂರು: ಕೋವಿಡ್-19 ಸೋಂಕು ತಗುಲಿದ್ದ ಒಬ್ಬರು ಸಾವಿಗೀಡಾಗಿದ್ದಾರೆ. ಶುಕ್ರವಾರ115 ಮಂದಿಗೆ ಸೋಂಕು ದೃಢಪಟ್ಟಿದ್ದು, 50 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿಕ್ಕಮಗಳೂರಿನ ವಿಜಯನಗರದ 46 ವರ್ಷದ ಮಹಿಳೆ (ಪಿ–502314) ಮೃತಪಟ್ಟವರು.
ತಾಲ್ಲೂಕುವಾರು ಸೋಂಕಿತರ ಸಂಖ್ಯೆ: ಕಡೂರು– 49, ತರೀಕೆರೆ– 30, ಚಿಕ್ಕಮಗಳೂರು– 25, ಮೂಡಿಗೆರೆ– 7, ಕೊಪ್ಪ– ನಾಲ್ಕು ಮಂದಿಗೆ ಸೋಂಕು ಪತ್ತೆಯಾಗಿದೆ.
ಜಿಲ್ಲೆಯಲ್ಲಿ 1471 ಸಕ್ರಿಯ ಪ್ರಕರಣಗಳು ಇವೆ. 5292 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 107 ಮಂದಿ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ. 2091 ನಿಯಂತ್ರಿತ ವಲಯಗಳು ಇವೆ.
ಪಟ್ಟಿ
ಜಿಲ್ಲೆಯಲ್ಲಿ ಒಟ್ಟು: 6920
ದಿನದ ಏರಿಕೆ: 115
ಸಕ್ರಿಯ ಪ್ರಕರಣ: 1471
ದಿನದ ಏರಿಕೆ: 101
ಗುಣಮುಖ: 5292
ದಿನದ ಏರಿಕೆ: 50
ಸಾವು:107
ದಿನದ ಏರಿಕೆ: 01
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.