ADVERTISEMENT

ಚಿಕ್ಕಮಗಳೂರು: ಡಿ.10ರಿಂದ ದತ್ತ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 20:25 IST
Last Updated 12 ನವೆಂಬರ್ 2019, 20:25 IST

ಚಿಕ್ಕಮಗಳೂರು: ಈ ಬಾರಿ ದತ್ತ ಜಯಂತ್ಯುತ್ಸವ ಡಿ.10ರಿಂದ 12ರವರೆಗೆ ನಡೆಯಲಿದೆ ಎಂದು ಬಜರಂಗದಳ ಸಹ ಸಂಯೋಜಕ ರಘು ಸಕಲೇಶಪುರ ಇಲ್ಲಿ ಮಂಗಳವಾರ ತಿಳಿಸಿದರು.

ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳ ವತಿಯಿಂದ ದತ್ತ ಜಯಂತ್ಯುತ್ಸವ ಸಂಘಟಿಸಲಾಗಿದೆ. ಡಿ.1ರಂದು ದತ್ತಮಾಲೆ ಧಾರಣೆ ಕೈಂಕರ್ಯ, 10ರಂದು ಅನಸೂಯಾ ಜಯಂತ್ಯುತ್ಸವ, 11ರಂದು ನಗರದಲ್ಲಿ ಶೋಭಾ ಯಾತ್ರೆ ಹಾಗೂ 12ರಂದು ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿನ ಗುಹೆಯಲ್ಲಿ ದತ್ತಪಾದುಕೆ ದರ್ಶನ ಜರುಗಲಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT