ADVERTISEMENT

ಚಿಕ್ಕಮಗಳೂರು: ಸಿಗರೇಟಿನಿಂದ ರಾಷ್ಟ್ರಧ್ವಜ ಸುಟ್ಟ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 6:26 IST
Last Updated 18 ಆಗಸ್ಟ್ 2022, 6:26 IST
   

ಚಿಕ್ಕಮಗಳೂರು: ನಗರದ ಬಾರಲೇನ್‌ನಲ್ಲಿ ಸಿಗರೇಟಿನಿಂದ ರಾಷ್ಟ್ರಧ್ವಜ ಸುಟ್ಟು, ತೂತಾಗಿಸಿರುವ ಕೃತ್ಯದ ವಿಡಿಯೊ ವೈರಲ್‌ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಸ್ಗರ್‌ (50) ಎಂಬಾತನನ್ನು ಬಂಧಿಸಲಾಗಿದೆ.

‘ಮನೆ ಬಳಿ ಕಟ್ಟಿದ್ದ ಧ್ವಜವನ್ನು ಸಿಗರೇಟಿನಿಂದ ಸುಟ್ಟು ತೂತಾಗಿಸಲಾಗಿದೆ. ಸಿಗರೇಟು ಸೇದಿ ಸುಡುವ ದೃಶ್ಯ ವಿಡಿಯೊದಲ್ಲಿವೆ. ರಾತ್ರಿ ವೇಳೆ ಕೃತ್ಯ ಎಸಗಲಾಗಿದೆ’ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಆರೋಪಿಯು ಬಾರಲೇನ್‌ ನಿವಾಸಿ. ಬಾಡಿಗೆ ಮನೆಯಲ್ಲಿ ವಾಸ. ಬುಧವಾರ ಬೆಳಿಗ್ಗೆ ನಗರದ ಬಸ್‌ ನಿಲ್ದಾಣದಲ್ಲಿ ಪತ್ತೆ ಮಾಡಿದ್ದೇವೆ. ಧ್ವಜವನ್ನು ವಶಪಡಿಸಿಕೊಂಡಿದ್ದೇವೆ. ರಾಷ್ಟ್ರ ಗೌರವಕ್ಕೆ ಅಪಮಾನ ಮಾಡಿದ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.