ADVERTISEMENT

ಚಿಕ್ಕಮಗಳೂರು | ಗಾಳಿ- ಮಳೆ: ಧರೆಗುರಳಿದ ಮರ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 7:10 IST
Last Updated 4 ಆಗಸ್ಟ್ 2020, 7:10 IST
ಮೂಡಿಗೆರೆ- ಸಕಲೇಶಪುರ ಮಾರ್ಗದಲ್ಲಿ ವೃಕ್ಷವೊಂದು ರಸ್ತೆಗೆ ಉರುಳಿದೆ
ಮೂಡಿಗೆರೆ- ಸಕಲೇಶಪುರ ಮಾರ್ಗದಲ್ಲಿ ವೃಕ್ಷವೊಂದು ರಸ್ತೆಗೆ ಉರುಳಿದೆ   

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಜೋರಾಗಿದೆ. ಮೂಡಿಗೆರೆ- ಸಕಲೇಶಪುರ ಮಾರ್ಗದಲ್ಲಿ ವೃಕ್ಷವೊಂದು ರಸ್ತೆಗೆ ಉರುಳಿದೆ, ಸಂಚಾರಕ್ಕೆ ಅಡಚಣೆಯಾಗಿದೆ.

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನ ಕಸ್ಕೇಬೈಲ್ ನಲ್ಲಿ ರಾಜು ಅವರ ಮನೆ ಗೋಡೆ ಕುಸಿದಿದೆ. ಕೊಟ್ಟಿಗೆಹಾರದಲ್ಲಿ 13.3 ಸೆಂ.ಮೀ ಮಳೆಯಾಗಿದೆ. ಗಾಳಿಮಳೆಗೆ ಗಿರಿಶ್ರೇಣಿ ಭಾಗದಲ್ಲಿ ಮರಗಳ ಟೊಂಗೆಗಳು ಮುರಿದು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT