ADVERTISEMENT

ಗಾಯತ್ರಿ ಶಾಂತೇಗೌಡ ಮನೆಯಲ್ಲಿ ಸತತ ಮೂರನೇ ದಿನವೂ ಐಟಿ ಶೋಧ

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 20:46 IST
Last Updated 19 ನವೆಂಬರ್ 2022, 20:46 IST

ಚಿಕ್ಕಮಗಳೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಅವರ ಮನೆ, ಕಚೇರಿಯಲ್ಲಿ ಆದಾಯ ತೆರಿಗೆ (ಐಟಿ) ತಂಡದವರು ಸತತ ಮೂರನೇ ದಿನವೂ (ಶನಿವಾರ) ಶೋಧ ನಡೆಸಿದರು.

ಗಾಯತ್ರಿ ಅವರ ಸಂಬಂಧಿ ಪರಮೇಶ್‌, ಗುತ್ತಿಗೆದಾರ ನಾಸೀರ್‌ ಅವರ ಮನೆಗಳಲ್ಲಿ ಶೋಧ ನಡೆಸಿದ್ದಾರೆ. ವಾಹನ ಚಾಲಕರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT