
ನರಸಿಂಹರಾಜಪುರ: ಬೆಳ್ಳೂರಿನಲ್ಲಿ ಫೆ. 21 ಹಾಗೂ 22ರಂದು ನಡೆಯುವ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸ್ವಾಗತ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ತಿಳಿಸಿದ್ದಾರೆ.
ಸ್ವಾಗತ ಸಮಿತಿ: ಮಹಾ ಪೋಷಕರಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಗೌರವಾಧ್ಯಕ್ಷರಾಗಿ ಶಾಸಕ ಟಿ.ಡಿ. ರಾಜೇಗೌಡ, ಅಧ್ಯಕ್ಷರಾಗಿ ಬೆಳ್ಳೂರು ವೆಂಕಟರಮಣಯ್ಯ, ಕಾರ್ಯಾಧ್ಯಕ್ಷರಾಗಿ ಎಸ್.ಎಸ್. ಸಂತೋಷ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಚ್. ಪೂರ್ಣೇಶ್ ಆಯ್ಕೆಯಾದರು.
ಸಂಪನ್ಮೂಲ ಸಮಿತಿ: ಗೌರವಾಧ್ಯಕ್ಷರಾಗಿ ಎಚ್.ಇ. ದಿವಾಕರ, ಅಧ್ಯಕ್ಷರಾಗಿ ಎನ್.ಪಿ. ರಮೇಶ್ ಯಡಗೆರೆ, ಕಾರ್ಯಾಧ್ಯಕ್ಷರಾಗಿ ಪಿ.ಜೆ. ಆಂಟ್ಯನಿ, ಪ್ರಧಾನ ಕಾರ್ಯದರ್ಶಿಗಳಾಗಿ ಹೆರಂದೂರು ಮಹೇಶ್, ಹೆಮ್ಮೂರ ಸಂದೀಪ್, ನರಸಿಂಹರಾಜಪುರ ಪ್ರಶಾಂತ ಶೆಟ್ಟಿ ಆಯ್ಕೆಗೊಂಡರು.
ಪ್ರಚಾರ ಸಮಿತಿ: ಗೌರವಾಧ್ಯಕ್ಷರಾಗಿ ಯಡಗೆರೆ ಮಂಜುನಾಥ್, ಅಧ್ಯಕ್ಷರಾಗಿ ಬೆಮ್ಮನೆ ಸುಬೋದ್, ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಬೈಲು ರಾಜು ಮತ್ತು ನಂದಿನಿ ಆಲಂದೂರು ಆಯ್ಕೆಯಾದರು.
ಸಾಂಸ್ಕೃತಿಕ ಸಮಿತಿ: ಗೌರವಾಧ್ಯಕ್ಷರಾಗಿ ಯಡಗೆರೆ ಜಯಶ್ರೀ, ಅಧ್ಯಕ್ಷರಾಗಿ ಯಡಗೆರೆ ವೆಂಕಟರಮಣ, ಪ್ರಧಾನ ಕಾರ್ಯದರ್ಶಿಗಳಾಗಿ ಹುಣಸೆಕೇರಿ ಸೃಜನ್ ಮತ್ತು ಸೀತೂರು ರಂಗಿಣಿ ಯು. ರಾವ್ ನೇಮಕಗೊಂಡರು.
ವೇದಿಕೆ ಸಮಿತಿ: ಗೌರವಾಧ್ಯಕ್ಷರಾಗಿ ಹೆಮ್ಮೂರು ಸದಾಶಿವ, ಅಧ್ಯಕ್ಷರಾಗಿ ಎನ್.ಪಿ. ರವಿ, ಪ್ರಧಾನ ಕಾರ್ಯದರ್ಶಿಗಳಾಗಿ ಚೇತನ್ ಸಾಲೇಸಿ ಮಕ್ಕಿ ಹಾಗೂ ಕರ್ನಾಟಕ ರಕ್ಷಣ ವೇದಿಕೆ ಅಧ್ಯಕ್ಷ ಹರ್ಷ ಆಯ್ಕೆಯಾದರು.
ಗೋಷ್ಠಿ ಸಮಿತಿ: ಗೌರವಾಧ್ಯಕ್ಷೆಯಾಗಿ ಭಾಗ್ಯನಂಜುಂಡಸ್ವಾಮಿ, ಅಧ್ಯಕ್ಷರಾಗಿ ಅಶೋಕ್, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ. ನೋಂದಣಿ ಸಮಿತಿ: ಗೌರವಾಧ್ಯಕ್ಷೆಯಾಗಿ ವಾಣಿ ನರೇಂದ್ರ, ಅಧ್ಯಕ್ಷರಾಗಿ ಕೋನೋಡಿ ಗಣೇಶ್, ಕಾರ್ಯದರ್ಶಿಗಳಾಗಿ ಮಂಜುನಾಥ್ ಬೆಳ್ಳೂರು ನೇಮಕವಾದರು.
ಸಮನ್ವಯ ಸಮಿತಿ: ಗೌರವಾಧ್ಯಕ್ಷರಾಗಿ ಬಿ.ಎಸ್. ಮಂಜುನಾಥ್, ಅಧ್ಯಕ್ಷರಾಗಿ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಬೆಮ್ಮನೆ ಮೋಹನ್.
ವಸ್ತು ಪ್ರದರ್ಶನ ಸಮಿತಿ: ಗೌರವಾಧ್ಯಕ್ಷೆಯಾಗಿ ಪ್ರೇಮಾ ಶ್ರೀನಿವಾಸ್, ಅಧ್ಯಕ್ಷರಾಗಿ ನಟರಾಜ ಮಲ್ಲಂದೂರು, ಪ್ರಧಾನ ಕಾರ್ಯದರ್ಶಿಯಾಗಿ ನರಸಿಂಹಮೂರ್ತಿ ಕಂಕಳೆ.
ಅಲಂಕಾರ ಸಮಿತಿ: ಗೌರವಾಧ್ಯಕ್ಷರಾಗಿ ರಾಜೇಶ್, ಅಧ್ಯಕ್ಷರಾಗಿ ಶೇಖರ ಶೆಟ್ಟಿ ಬೆಳ್ಳೂರು, ಪ್ರಧಾನ ಕಾರ್ಯದರ್ಶಿಯಾಗಿ ಭವ್ಯ ಸಂತೋಷ್.
ಆಹಾರ ಸಮಿತಿ: ಗೌರವಾಧ್ಯಕ್ಷರಾಗಿ ಕಣೇಬೈಲು ರಮೇಶ್, ಅಧ್ಯಕ್ಷರಾಗಿ ಮಲ್ಲಂದೂರು ಮಧುಕರ, ಪ್ರಧಾನ ಕಾರ್ಯದರ್ಶಿಯಾಗಿ ಕಣಿವೆ ಪ್ರಪುಲ್ಲ.
ಮೆರವಣಿಗೆ ಸಮಿತಿ: ಗೌರವಾಧ್ಯಕ್ಷರಾಗಿ ಸಿದ್ದಪ್ಪಗೌಡ, ಅಧ್ಯಕ್ಷರಾಗಿ ಕೆ.ಎಸ್. ಉಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ಹುಗಳಬೈಲ್ ಪ್ರಕಾಶ್ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.