ADVERTISEMENT

ಭದ್ರಾ ಅಭಯಾರಣ್ಯದ ಹಿನ್ನೀರು ಪ್ರದೇಶದಲ್ಲಿ ಗಂಡಾನೆ ಮರಿ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 8:35 IST
Last Updated 12 ಆಗಸ್ಟ್ 2019, 8:35 IST
ಭದ್ರಾ ಅಭಯಾರಣ್ಯದ ಹಿನ್ನೀರು ಪ್ರದೇಶದಲ್ಲಿ ಪತ್ತೆಯಾದ ಗಂಡಾನೆ ಮರಿ ಕಳೇಬರ.
ಭದ್ರಾ ಅಭಯಾರಣ್ಯದ ಹಿನ್ನೀರು ಪ್ರದೇಶದಲ್ಲಿ ಪತ್ತೆಯಾದ ಗಂಡಾನೆ ಮರಿ ಕಳೇಬರ.   

ಚಿಕ್ಕಮಗಳೂರು/ತರೀಕೆರೆ: ಜಿಲ್ಲೆಯ ಭದ್ರಾ ಅಭಯಾರಣ್ಯದಲ್ಲಿನ ಹಿನ್ನೀರು ಪ್ರದೇಶದ ದಡದಲ್ಲಿ ಗಂಡಾನೆ ಮರಿ ಕಳೇಬರ ಶನಿವಾರ ಪತ್ತೆಯಾಗಿದೆ.

ಭದ್ರಾ ಹಿನ್ನೀರು ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಮಧ್ಯಾಹ್ನ ಗಸ್ತು ತಿರುಗುವಾಗ ಆನೆ ಮರಿಯ ಶವ ಕಾಣಿಸಿದೆ. ದಡದ ಬಳಿ ಇದ್ದ ಕಳೇಬರವನ್ನು ಸಿಬ್ಬಂದಿ ಹೊರಕ್ಕೆ ತಂದಿದ್ದಾರೆ.

ಸಹಾಯಕ ಅರಣ್ಯಾಧಿಕಾರಿ ರತ್ನಪ್ರಭ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಆನೆ ಮರಿ ಮೃತಪಟ್ಟು ಮೂರ್ನಾಲ್ಕು ದಿನಗಳಾಗಿರಬಹುದು. ದೇಹದ ಮೇಲೆ ಕಾದಾಡಿದ ಗುರುತುಗಳಿರಲಿಲ್ಲ’ ಎಂದು ತಿಳಿಸಿದರು.

ADVERTISEMENT

‘ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತಾಯಿಯಿಂದ ಬೇರ್ಪಟ್ಟು ಆಹಾರವಿಲ್ಲದೆ ಮೃತಪಟ್ಟಿರಬಹುದು ಎಂದು ವೈದರು ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.