ಬೀರೂರು: ಇಲ್ಲಿನ ಹೊರ ವಲಯದ ಹಿರಿಯಂಗಳ ಗ್ರಾಮದ ಬಳಿ ಹೆಳವರ ಹಟ್ಟಿ ಕಡೆ ತೆರಳುವ ಮಾರ್ಗದಲ್ಲಿ ಶನಿವಾರ ಜಂಗಲ್ ಕಟಾವು ಮಾಡುವಾಗ ಬೀರೂರು ಉಪವಿಭಾಗ ಕಚೇರಿ ಲೈನ್ಮನ್ ದೇವರಾಜು (33) ವಿದ್ಯುತ್ ಅವಘಡದಲ್ಲಿ
ಸಾವನ್ನಪ್ಪಿದ್ದಾರೆ.
ಅಜ್ಜಂಪುರ ತಾಲ್ಲೂಕು ಬಗ್ಗವಳ್ಳಿ ಗ್ರಾಮದವರಾದ ದೇವರಾಜು 4 ವರ್ಷಗಳ ಹಿಂದೆ ಮೆಸ್ಕಾಂಗೆ ಲೈನ್ಮನ್ ಆಗಿ ಕರ್ತವ್ಯಕ್ಕೆ ಸೇರಿದ್ದರು. ವಿದ್ಯುತ್ ತಂತಿ ಮೇಲೆ ಅಡಿಕೆ ಸೋಗೆ ಬೀಳುತ್ತಿರುವ ಬಗ್ಗೆ ಶನಿವಾರ ಬೆಳಿಗ್ಗೆ ರೈತರೊಬ್ಬರು ದೂರು ನೀಡಿದ್ದರು. ಅಲಿ ಹಾದು ಹೋಗಿರುವ ಎಫ್ 10 ಮತ್ತು ಎಫ್ 9 ಸಂಪರ್ಕವು ಒಂದೇ ಲೈನ್ನಲ್ಲಿರುವ ಬಗ್ಗೆ ಮಾಹಿತಿ ಇಲ್ಲದೆ ಕೇವಲ ಎಫ್ 10 ಲೈನ್ ಅನ್ನು ಮಾತ್ರ ಬಂದ್ ಮಾಡಿ ಜಂಗಲ್ ಕತ್ತರಿಸಲು ಮುಂದಾಗಿದ್ದಾರೆ. ಈ ವೇಳೆ ಎಫ್ 9ನಿಂದ ಹರಿಯುತ್ತಿದ್ದ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.