ಚಿಕ್ಕಮಗಳೂರು: ಕಡೂರು ತಾಲ್ಲೂಕಿನ ಯರೇಹಳ್ಳಿಯ ಜಮೀನಿನಲ್ಲಿ ಮಂದೆ ನಿಂತಿದ್ದ ಕುರಿಗಳಲ್ಲಿ 40ಕ್ಕೂ ಹೆಚ್ಚು ಮೃತಪಟ್ಟಿವೆ.
ನಾಗಮಂಗಲ ರೈಲ್ವೆ ಗೇಟ್ ಪ್ರದೇಶಕ್ಕೆ ಕುರಿಗಳು ಮೇಯುಲು ಹೋಗಿದ್ದವು. ಸೊಪ್ಪು– ಸೆದೆ ತಿಂದ ನಂತರ ಕುರಿಗಳು ಮೃತಪಟ್ಟಿವೆ ಯರೇಹಳ್ಳಿ ಗ್ರಾಮಸ್ಥ ರಾಜಾ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಶಿರಾ ಭಾಗದಿಂದ ಇಲ್ಲಿಗೆ ಬಂದಿರುವ ಕುರಿಗಾಹಿಗಳು ಗ್ರಾಮದ ಜಮೀನೊಂದರಲ್ಲಿ ಮಂದೆ ಬಿಟ್ಟಿದ್ದಾರೆ. ಕುರಿಗಳು ಒಮ್ಮಲೇ ಸಾವಿಗೀಡಾಗಿರುವುದು ಆತಂಕಕ್ಕೆ ಎಡೆಮಾಡಿದೆ. ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಉಮೇಶ್ಸ್ಥಳಕ್ಕೆ ಭೇಟಿ ನೀಡಿ, ಮಾದರಿ ಸಂಗ್ರಹಿಸಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.