ADVERTISEMENT

ಕಡೂರು: ಪತಿಯಿಂದಲೇ ಪತ್ನಿಯ ಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 17:03 IST
Last Updated 9 ಜುಲೈ 2021, 17:03 IST

ಕಡೂರು: ತಾಲ್ಲೂಕಿನ ಪಂಚನಹಳ್ಳಿ ಬಳಿಯ ಬಿ.ಕಾವಲಹಟ್ಟಿ ಗ್ರಾಮದ ಗೀತಾ(40) ಅವರನ್ನು ಅವರ ಪತಿಯೇ ಹತ್ಯೆ ಮಾಡಿದ್ದಾರೆ.

ಗುರುವಾರ ರಾತ್ರಿ ಗೀತಾ ಅವರ ಗಂಡ ಶೇಖರ್ ಮದ್ಯಪಾನ‌ ಮಾಡಿ ಮನೆಗೆ ಬಂದಿದ್ದು, ಹೆಂಡತಿ ಜೊತೆ ಜಗಳವಾಡಿದ್ದಾನೆ. ಗೀತಾ ಅವರಿಗೂ ಮದ್ಯಪಾನ ಮಾಡುವ ಅಭ್ಯಾಸವಿತ್ತೆನ್ನಲಾಗಿದೆ. ಜಗಳ ವಿಕೋಪಕ್ಕೆ ಹೋಗಿ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ನಂತರ ಇಬ್ಬರೂ ಮಲಗಿದ್ದಾರೆ.

ಬೆಳಿಗ್ಗೆ ನೋಡಿದಾಗ ಗೀತಾ ಮೃತದೇಹ ಪತ್ತೆಯಾಗಿದೆ. ಶೇಖರ್ ನಾಪತ್ತೆಯಾಗಿದ್ದಾನೆ.

ADVERTISEMENT

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಯೇಗನಗೌಡ, ಇನ್‌ಸ್ಪೆಕ್ಟರ್ ಮಂಜುನಾಥ್, ಪಿಎಸ್‌ಐ ಶೋಭಾ ಭೇಟಿ ನೀಡಿದ್ದಾರೆ. ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಂಪತಿಗೆ ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.