ADVERTISEMENT

ಕಸ್ತೂರಿ ರಂಗನ್ ವರದಿಗೆ ವಿರೋಧ: ಎನ್‌.ಆರ್.ಪುರ ಬಂದ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:29 IST
Last Updated 15 ಅಕ್ಟೋಬರ್ 2020, 5:29 IST
ಎನ್‌.ಆರ್‌.ಪುರ ಬಂದ್
ಎನ್‌.ಆರ್‌.ಪುರ ಬಂದ್   

ಎನ್‌.ಆರ್‌.ಪುರ (ಚಿಕ್ಕಮಗಳೂರು ಜಿಲ್ಲೆ): ಭದ್ರಾ ಹುಲಿ ಯೋಜನೆ ಬಫರ್ ಜೋನ್, ಪರಿಸರ ಸೂಕ್ಷ್ಮ ವಲಯ, ಕಸ್ತೂರಿ ರಂಗನ್ ವರದಿ, ಮೀಸಲು ಅರಣ್ಯ ಪ್ರಸ್ತಾವ ವಿರೋಧಿಸಿ ಮಲೆನಾಡು ರೈತರ ಹಿತರಕ್ಷಣಾ ಸಮಿತಿ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಎನ್.ಆರ್. ಪುರ ತಾಲ್ಲೂಕು ಬಂದ್ ನಡೆಯುತ್ತಿದೆ.

ಎನ್.ಆರ್. ಪುರದಲ್ಲಿ ಅಂಗಡಿ, ಮಳಿಗೆಗಳು ಮುಚ್ಚಿವೆ. ವಾಹನ ಸಂಚಾರ ಇಲ್ಲ. ಪ್ರತಿಭಟನಾ ಜಾಥಾ, ಸಭೆ ನಡೆಸಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT