ADVERTISEMENT

ಮಳೆ: ಹೊನ್ಮಮ್ಮನ ಹಳ್ಳದ ಸೇತುವೆ ಬದಿಯ ಮಣ್ಣು ಕುಸಿತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 8:24 IST
Last Updated 21 ಅಕ್ಟೋಬರ್ 2021, 8:24 IST
   

ಚಿಕ್ಕಮಗಳೂರು: ಜಿಲ್ಲೆಯ ನಸುಕಿನಲ್ಲಿ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಗಿರಿಶ್ರೇಣಿಯ ಹೊನ್ನಮ್ಮನ ಹಳ್ಳ ಸೇತುವೆ ಬದಿಯ ಮಣ್ಣು ಕುಸಿದಿದೆ.

ಕೆಳಗೆಇಳಿಯಲು ನಿರ್ಮಿಸಿರುವ ಮೆಟ್ಟಿಲುಗಳ (ದೇಗುಲದ ಮುಂಭಾಗ) ಬದಿಯ ಮಣ್ಣು ಕುಸಿದಿದೆ. ಗಿರಿ ಶ್ರೇಣಿ ಮಾರ್ಗದ ಮೈಲಿಮನೆ ಎಸ್ಟೇಟ್‌ ಬಳಿ ರಸ್ತೆ ಬದಿಯ ರಕ್ಷಣಾ ಗೋಡೆ ಜರಿದಿದೆ. ಮಣ್ಣು ಕುಸಿದಿದೆ.

ಅತ್ತಿಗುಂಡಿ, ದತ್ತಪೀಠ ಸುತ್ತಮುತ್ತಲಿನ ಭಾಗದಲ್ಲಿ ರಭಸವಾಗಿ ಮಳೆ ಸುರಿದಿದೆ. ಚಿಕ್ಕಮಗಳೂರು ಮತ್ತು ಮೇಗರಮಕ್ಕಿ – 4, ಕಿಗ್ಗಾ– 3.6, ಅತ್ತಿಗುಂಡಿ – 3 ಸೆಂ.ಮೀ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.