ಚಿಕ್ಕಮಗಳೂರು: ಜಿಲ್ಲೆಯ ನಸುಕಿನಲ್ಲಿ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಗಿರಿಶ್ರೇಣಿಯ ಹೊನ್ನಮ್ಮನ ಹಳ್ಳ ಸೇತುವೆ ಬದಿಯ ಮಣ್ಣು ಕುಸಿದಿದೆ.
ಕೆಳಗೆಇಳಿಯಲು ನಿರ್ಮಿಸಿರುವ ಮೆಟ್ಟಿಲುಗಳ (ದೇಗುಲದ ಮುಂಭಾಗ) ಬದಿಯ ಮಣ್ಣು ಕುಸಿದಿದೆ. ಗಿರಿ ಶ್ರೇಣಿ ಮಾರ್ಗದ ಮೈಲಿಮನೆ ಎಸ್ಟೇಟ್ ಬಳಿ ರಸ್ತೆ ಬದಿಯ ರಕ್ಷಣಾ ಗೋಡೆ ಜರಿದಿದೆ. ಮಣ್ಣು ಕುಸಿದಿದೆ.
ಅತ್ತಿಗುಂಡಿ, ದತ್ತಪೀಠ ಸುತ್ತಮುತ್ತಲಿನ ಭಾಗದಲ್ಲಿ ರಭಸವಾಗಿ ಮಳೆ ಸುರಿದಿದೆ. ಚಿಕ್ಕಮಗಳೂರು ಮತ್ತು ಮೇಗರಮಕ್ಕಿ – 4, ಕಿಗ್ಗಾ– 3.6, ಅತ್ತಿಗುಂಡಿ – 3 ಸೆಂ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.