ADVERTISEMENT

ಆಲ್ದೂರು | ಹೆದ್ದಾರಿ ರಸ್ತೆಯ ಗುಂಡಿ ಮುಚ್ಚಿಸಿದ ಸತ್ತಿಹಳ್ಳಿ ಪಂಚಾಯಿತಿ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 14:11 IST
Last Updated 6 ಆಗಸ್ಟ್ 2023, 14:11 IST
ಸಮೀಪದ ಸತಿಹಳ್ಳಿ ಪಂಚಾಯಿತಿ ನೂತನ ಅಧ್ಯಕ್ಷ ಧ್ರುವ ಕುಮಾರ್ ಸ್ವಂತ ವೆಚ್ಚದಲ್ಲಿ ಸುತ್ತಮುತ್ತಲಿನ ಹೆದ್ದಾರಿ ಗುಂಡಿಗಳನ್ನು ಮುತುವರ್ಜಿ ವಹಿಸಿ ಮುಚ್ಚಿಸಿದರು
ಸಮೀಪದ ಸತಿಹಳ್ಳಿ ಪಂಚಾಯಿತಿ ನೂತನ ಅಧ್ಯಕ್ಷ ಧ್ರುವ ಕುಮಾರ್ ಸ್ವಂತ ವೆಚ್ಚದಲ್ಲಿ ಸುತ್ತಮುತ್ತಲಿನ ಹೆದ್ದಾರಿ ಗುಂಡಿಗಳನ್ನು ಮುತುವರ್ಜಿ ವಹಿಸಿ ಮುಚ್ಚಿಸಿದರು   

ಆಲ್ದೂರು: ಸಮೀಪದ ಸತ್ತಿಹಳ್ಳಿ ಪಂಚಾಯಿತಿಯ ನೂತನ ಅಧ್ಯಕ್ಷ ಧ್ರುವ ಕುಮಾರ್ ಅವರು, ಹಾಂದಿ ಆಟೊ ವೃತ್ತದ ಬಳಿ, ಪಂಚಾಯಿತಿ ಮುಂಭಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಗುಂಡಿಗಳನ್ನು ಸ್ವಂತ ಖರ್ಚಿನಿಂದ ಜಲ್ಲಿ ಪುಡಿ ಹಾಕಿಸಿ ಸರಿಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಧ್ರುವ ಕುಮಾರ್, ಸಾಕಷ್ಟು ಬಾರಿ ಸಮೀಪದ ಹೆದ್ದಾರಿ ರಸ್ತೆಯ ಗುಂಡಿಗಳಿಂದ ಅಪಘಾತಗಳಾಗಿದ್ದು, ಜನಸಾಮಾನ್ಯರು ಯಾವಾಗಲೂ ತೊಂದರೆ ಅನುಭವಿಸುತ್ತಿರುತ್ತಾರೆ. ಆದ್ದರಿಂದ ವಾಹನ ಸವಾರರಿಗೆ ಅನುಕೂಲವಾಗಲೆಂದು ಸ್ವಂತ ಖರ್ಚಿನಲ್ಲಿ ಗುಂಡಿಗಳನ್ನು ಮುಚ್ಚಿಸಿರುವುದಾಗಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT