ADVERTISEMENT

ಬಿ.ಕೋಡಿಹಳ್ಳಿ- ಸಡಗರದ ತುಳಸಿ ಕಲ್ಯಾಣೋತ್ಸವ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 7:34 IST
Last Updated 7 ನವೆಂಬರ್ 2022, 7:34 IST
ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ರಂಗನಾಥಸ್ವಾಮಿಯವರ ವೃಂದಾವನೋತ್ಸವ ಮತ್ತು ತುಳಸಿ ಕಲ್ಯಾಣ ನೆರವೇರಿತು.
ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ರಂಗನಾಥಸ್ವಾಮಿಯವರ ವೃಂದಾವನೋತ್ಸವ ಮತ್ತು ತುಳಸಿ ಕಲ್ಯಾಣ ನೆರವೇರಿತು.   

ಬೀರೂರು: ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಶನಿವಾರ ತುಳಸಿ ಕಲ್ಯಾಣ ಮತ್ತು ವೃಂದಾವನೋತ್ಸವ ನೆರವೇರಿತು.

ಉತ್ಥಾನದ್ವಾದಶಿ ಅಂಗವಾಗಿ ಶನಿವಾರ ಗ್ರಾಮದೇವತೆ ರಂಗನಾಥಸ್ವಾಮಿಗೆ ಅಭಿಷೇಕ, ಪುಷ್ಪಾಲಂಕಾರ ನೆರವೇರಿಸಿ, ಕಲ್ಯಾಣೋತ್ಸವ ನಡೆಸಲು ಉತ್ಸವ ಮೂರ್ತಿಗಳನ್ನು ರಾತ್ರಿ ವೃಂದಾವನಕ್ಕೆ ಕರೆತಂದು ಪ್ರತಿಷ್ಠಾಪಿಸಲಾಯಿತು. ಅಲ್ಲಿ ತುಳಸಿ-ರಂಗನಾಥಸ್ವಾಮಿ ಕಲ್ಯಾಣ ಸೇವೆ, ಮಹಾಮಂಗಳಾರತಿ, ಭಾನುವಾರ ಬೆಳಿಗ್ಗೆ ಹಣ್ಣು, ತುಪ್ಪ ಸೇವೆ, ಗಂಗಾಪೂಜೆ ಸಲ್ಲಿಸಿ ಗುಡಿ ತುಂಬಿಸಲಾಯಿತು. ಸಂಜೆ ಸ್ವಾಮಿಯ ಊರ ಮೆರವಣಿಗೆ, ಪ್ರಸಾದ ವಿನಿಯೋಗ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT