ADVERTISEMENT

ಕಳಸ ಸಮೀಪ ಬೈಕ್‌ನಿಂದ ಬಿದ್ದು ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 8:08 IST
Last Updated 2 ಜನವರಿ 2020, 8:08 IST

ಚಿಕ್ಕಮಗಳೂರು: ಜಿಲ್ಲೆಯ ಕಳಸ ಸಮೀಪದ ನೇರಂಕಿ ಬಳಿ ಕಾಡುಕೋಣ ಬೈಕಿಗೆ ತಿವಿಯಲು ಮುಂದಾದಾಗ ಸವಾರರಿಬ್ಬರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೇರಂಕಿ ಗ್ರಾಮದ ಮಂಗಳಾ (16) ಮತ್ತು ಸಂದೀಪ್ (23) ಗಾಯಗೊಂಡಿದ್ದಾರೆ. ಇಬ್ಬರನ್ನು ಚಿಕಿತ್ಸೆಗೆ ಮಂಗಳೂರಿಗೆ ಒಯ್ಯಲಾಗಿದೆ.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಇವರಿಬ್ಬರು ನೇರಂಕಿಯಿಂದ ಹಿರೇಬೈಲಿಗೆ ತೆರಳುತ್ತಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.