ADVERTISEMENT

ನರಸಿಂಹರಾಜಪುರ: ಆನೆ–ಮಾನವ ಸಂಘರ್ಷ ತಡೆಗೆ ಸೌರವಿದ್ಯುತ್ ಚಾಲಿತ ಯಂತ್ರ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 13:50 IST
Last Updated 19 ಜನವರಿ 2025, 13:50 IST
ನರಸಿಂಹರಾಜಪುರ ತಾಲ್ಲೂಕು ಜೇನುಕಟ್ಟೆ ಸರದ ಗ್ರಾಮದ ವ್ಯಾಪ್ತಿಯ ಮರವೊಂದರಲ್ಲಿ ಆನೆ ಹಾವಳಿ ತಡೆ ಸೌರ ವಿದ್ಯುತ್ ಯಂತ್ರವನ್ನು ಅರಣ್ಯ ಇಲಾಖೆಯಿಂದ ಶನಿವಾರ ಅಳವಡಿಸಲಾಗಿದೆ
ನರಸಿಂಹರಾಜಪುರ ತಾಲ್ಲೂಕು ಜೇನುಕಟ್ಟೆ ಸರದ ಗ್ರಾಮದ ವ್ಯಾಪ್ತಿಯ ಮರವೊಂದರಲ್ಲಿ ಆನೆ ಹಾವಳಿ ತಡೆ ಸೌರ ವಿದ್ಯುತ್ ಯಂತ್ರವನ್ನು ಅರಣ್ಯ ಇಲಾಖೆಯಿಂದ ಶನಿವಾರ ಅಳವಡಿಸಲಾಗಿದೆ   

ನರಸಿಂಹರಾಜಪುರ: ವನ್ಯ ಪ್ರಾಣಿಗಳು ಹತ್ತಿರ ಬಂದಾಗ ಜೋರಾಗಿ ಶಬ್ದ ಮಾಡುವ ಸೌರಶಕ್ತಿ ಚಾಲಿತ ಯಂತ್ರವನ್ನು ಅರಣ್ಯ ಇಲಾಖೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಳವಡಿಸಿದೆ.

ಆನೆ–ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದೆ. ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಿರುವ ಜೇನುಕಟ್ಟೆಸರ ಗ್ರಾಮದಲ್ಲಿ ಮರವೊಂದರ ಮೇಲೆ ತಾತ್ಕಾಲಿಕವಾಗಿ ಈ ಯಂತ್ರವನ್ನು ಅಳವಡಿಸಲಾಗಿದೆ.

‘ಮುಂದಿನ ದಿನಗಳಲ್ಲಿ ಈ ಯಂತ್ರವನ್ನು ಕಬ್ಬಿಣದ ಕಂಬದ ಮೇಲೆ ಶಾಶ್ವತವಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಯಾವ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಾಗಿದೆ ಆ ಗ್ರಾಮಗಳ ರಸ್ತೆ ಬದಿಯಲ್ಲಿ ಜಂಗಲ್‌ ಕ್ಲಿಯರೆನ್ಸ್‌ ಮಾಡಲಾಗಿದ್ದು, ಬೆಂಕಿರೇಖೆ ನಿರ್ಮಿಸಲಾಗಿದೆ. ಹಾಗಾಗಿ ಆನೆಗಳು ರಸ್ತೆ ಬದಿಯಲ್ಲಿ ನಿಂತರೂ ದೂರದಿಂದಲೇ ಕಾಣಿಸುತ್ತದೆ. ಈ ಯಂತ್ರದಿಂದ ಆನೆಗಳ ಚಲನವಲನದ ಮೇಲೆ ನಿಗಾ ವಹಿಸಲು, ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT
ನರಸಿಂಹರಾಜಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವ ಗ್ರಾಮದ ರಸ್ತೆಯ ಎರಡು ಬದಿ ಜಂಗಲ್ ಕ್ಲಿಯರೆನ್ಸ್ ಮಾಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.