ADVERTISEMENT

ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2015, 6:48 IST
Last Updated 11 ಮೇ 2015, 6:48 IST

ಮೊಳಕಾಲ್ಮುರು: ತಾಲ್ಲೂಕಿನ ಮೊಗಲಹಳ್ಳಿಯಲ್ಲಿ ಭಾನುವಾರ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ವೈಭವವಾಗಿ ಆಚರಣೆ ಮಾಡಲಾಯಿತು.

ಸ್ಥಳೀಯ ರೆಡ್ಡಿ ಜನಾಂಗದ ನೇತೃತ್ವದಲ್ಲಿ ನಡೆದ ಈ ಜಯಂತಿಯನ್ನು ಪ್ರತಿವರ್ಷ ಮೇ 10ರಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಗ್ರಾಮ ಪಂಚಾಯ್ತಿ ನೀತಿಸಂಹಿತೆ ಜಾರಿ ಹಂತದಲ್ಲಿ ಇರುವ ಹಿನ್ನೆಲೆಯಲ್ಲಿ ಜಯಂತಿಯನ್ನು ಮೆರವಣಿಗೆಗೆ ಮಾತ್ರ ಸೀಮಿತ ಮಾಡಲಾಯಿತು ಎಂದು ಆಯೋಜಕರು ತಿಳಿಸಿದರು.

ಜನಾಂಗದ ಮುಖಂಡರಾದ ಹನುಮಂತರೆಡ್ಡಿ, ಆರ್.ರಾಮರೆಡ್ಡಿ, ಕೆ.ಟಿ. ಶ್ರೀರಾಮರೆಡ್ಡಿ, ನಾರಾಯಣ ರೆಡ್ಡಿ, ಚಿದಾನಂದ ರೆಡ್ಡಿ ಇತರರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.