ADVERTISEMENT

ಹೊಸದುರ್ಗ ತಾಲ್ಲೂಕು ಹೆಗ್ಗೆರೆ ಕೆರೆಯಲ್ಲಿ ಮುಳುಗಿದ್ದ ಮೂವರು ಬಾಲಕರ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 5:13 IST
Last Updated 21 ಅಕ್ಟೋಬರ್ 2017, 5:13 IST
ಹೊಸದುರ್ಗ ತಾಲ್ಲೂಕು ಹೆಗ್ಗೆರೆ ಕೆರೆಯಲ್ಲಿ ಮುಳುಗಿದ್ದ ಮೂವರು ಬಾಲಕರ ಶವ ಪತ್ತೆ
ಹೊಸದುರ್ಗ ತಾಲ್ಲೂಕು ಹೆಗ್ಗೆರೆ ಕೆರೆಯಲ್ಲಿ ಮುಳುಗಿದ್ದ ಮೂವರು ಬಾಲಕರ ಶವ ಪತ್ತೆ   

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ಹೆಗ್ಗೆರೆ ಗ್ರಾಮದ‌ ಕೆಂಪಮ್ಮನ ಕೆರೆಯಲ್ಲಿ ಈಜಾಡಲು ಹೋಗಿ ನಾಪತ್ತೆಯಾಗಿದ್ದ ಮೂವರು ಬಾಲಕರ ಶವಗಳನ್ನು ಶನಿವಾರ ಬೆಳಿಗ್ಗೆ ಹೊರ ತೆಗೆಯಲಾಗಿದೆ.

ಕಾಂತರಾಜ್, ಮಹಂತೇಶ್ ಮತ್ತು ಕೆಂಪರಾಜು ನೀರಿನಲ್ಲಿ‌ ಮುಳುಗಿದ ಬಾಲಕರು. ಎಲ್ಲರೂ 14 ವರ್ಷ ವಯಸ್ಸಿನವರಾಗಿದ್ದು, ಹೆಗ್ಗೆರೆ ಗ್ರಾಮದವರು. ಲಕ್ಷ್ಮಿ ರಂಗನಾಥ ಗ್ರಾಮಾಂತರ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು.

ಶುಕ್ರವಾರ ಮಧ್ಯಾಹ್ನ ಈಜಲು ತೆರಳಿದ್ದ ಬಾಲಕರು ಕೆರೆಯಲ್ಲಿ ಮುಳುಗಿದ್ದರು. ಸಂಜೆ ಹೊತ್ತಿಗೆ ಈ ವಿಷಯ ಬೆಳಕಿಗೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬಾಲಕರಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ಆರಂಭಿಸದ್ದರು. ಕತ್ತಲಾವರಿಸಿದ್ದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು.

ADVERTISEMENT

ಶನಿವಾರ ಮುಂಜಾನೆ ಕಾರ್ಯಾಚರಣೆ‌ ಮುಂದುವರಿಯಿತು. 7ಗಂಟೆ ಸುಮಾರಿಗೆ ಮೂವರು ಬಾಲಕರ ಶವಗಳನ್ನು ಹೊರತೆಗೆಯಲಾಯಿತು. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.