ಪ್ರಾತಿನಿಧಿಕ ಚಿತ್ರ
ಚಳ್ಳಕೆರೆ: ವಿವಿಧ ಜಿಲ್ಲೆಗಳಲ್ಲಿ ಕಳವು ಮಾಡಿದ್ದ 34 ಬೈಕ್ಗಳನ್ನು ಗುರುವಾರ ವಶಪಡಿಸಿಕೊಂಡಿರುವ ಇಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿರಿಯೂರಿನ ಅಜಾದ್ ನಗರದ ಲಾರಿ ಚಾಲಕ ಪಿ.ಮಹ್ಮದ್ ಷರೀಪ್ (35) ಬಂಧಿತ.
ಚಳ್ಳಕೆರೆಯಲ್ಲಿ 2 ಬೈಕ್, ಹೊಸದುರ್ಗದಲ್ಲಿ 4, ಹೊಳಲ್ಕೆರೆ 2, ಹಿರಿಯೂರಿನಲ್ಲಿ ಒಂದು, ಚಿತ್ರದುರ್ಗ ನಗರ 4, ಚಿತ್ರದುರ್ಗ ಬಡಾವಣೆ 6, ದಾವಣಗೆರೆ 3, ತುಮಕೂರು 8, ಶಿವಮೊಗ್ಗ 10, ಚಿಕ್ಕಮಗಳೂರು ಒಂದು ಸೇರಿ ವಿವಿಧೆಡೆ ಕಳುವಾಗಿದ್ದ ₹ 14 ಲಕ್ಷ ಮೌಲ್ಯದ ಒಟ್ಟು 34 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಭಂಡಾರು ಹಾಗೂ ಅಧೀಕ್ಷಕ ಶಿವಕುಮಾರ್ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ಉಮೇಶ್ ಈಶ್ವರ ನಾಯ್ಕ, ಸತ್ಯಾನಾಂರಾಯಣ, ಕೆ.ಕುಮಾರ್ ಅಧಿಕಾರಿಗಳ ತಂಡ ಕಾರ್ಯಾಚಾರಣೆ ನಡೆಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.